'ಬೀದಿ ನಾಯಿಗಳಿಗೆ ಉತ್ತಮ ಜೀವನ ನೀಡಿ': ವಿವಾದದ ನಡುವೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ವಿನಂತಿ

ದೆಹಲಿ ಸರ್ಕಾರದ ಪರವಾಗಿ ಹಾಜರಾದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಿಂದ ಗಾಯಗಳು ಮತ್ತು ರೇಬೀಸ್ ಸಾವುಗಳು ಸಂಭವಿಸುತ್ತಿವೆ ಎಂದರು.
Kapil Dev
ಕಪಿಲ್ ದೇವ್
Updated on

ಸುಪ್ರೀಂ ಕೋರ್ಟ್ ಇತ್ತೀಚೆಗೆ ಬೀದಿ ನಾಯಿಗಳನ್ನು ಆಶ್ರಯ ಮನೆಗಳಿಗೆ ವರ್ಗಾಯಿಸುವಂತೆ ನೀಡಿದ ಆದೇಶದ ನಂತರ, ಬೀದಿ ನಾಯಿಗಳಿಗೆ ಉತ್ತಮ ಜೀವನವನ್ನು ಒದಗಿಸುವಂತೆ ಭಾರತೀಯ ಕ್ರಿಕೆಟ್ ತಂಡದ ದಂತಕಥೆ ಕಪಿಲ್ ದೇವ್ ದೆಹಲಿ ಅಧಿಕಾರಿಗಳನ್ನು ಒತ್ತಾಯಿಸಿದರು. ಸುಪ್ರೀಂ ಕೋರ್ಟ್ ಈ ಹಿಂದೆ ದೆಹಲಿ ಸರ್ಕಾರ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಆಶ್ರಯ ಮನೆಗಳಲ್ಲಿ ಇರಿಸುವಂತೆ ಸೂಚಿಸಿತ್ತು.

ಪ್ರಾಣಿ ಕಲ್ಯಾಣ ಗುಂಪು ಪೆಟ್‌ಫ್ಯಾಮಿಲಿಯಾಗೆ ನೀಡಿದ ವಿಡಿಯೋ ಸಂದೇಶದಲ್ಲಿ, 1983ರ ವಿಶ್ವಕಪ್ ವಿಜೇತ ನಾಯಕ, 'ನಾಯಿಗಳ ಬಗ್ಗೆ ಬಹಳಷ್ಟು ವಿಷಯಗಳನ್ನು ಹೇಳಲಾಗುತ್ತಿದೆ ಎಂದು ನನಗೆ ತಿಳಿದಿದೆ. ಆದರೆ, ಒಬ್ಬ ನಾಗರಿಕನಾಗಿ, ಅವು ಅತ್ಯಂತ ಸುಂದರವಾದ ಜೀವಿಗಳು ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಅಧಿಕಾರಿಗಳು ಅವುಗಳನ್ನು ಉತ್ತಮವಾಗಿ ನೋಡಿಕೊಳ್ಳಬೇಕು ಮತ್ತು ಅವುಗಳಿಗೆ ಉತ್ತಮ ಜೀವನವನ್ನು ನೀಡಬೇಕು ಮತ್ತು ಅವುಗಳನ್ನು ಹೊರಗೆ ಎಸೆಯಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದಿದ್ದಾರೆ.

ಈಮಧ್ಯೆ, ಸುಪ್ರೀಂ ಕೋರ್ಟ್‌ನ ಮತ್ತೊಂದು ಪೀಠವು ಹಿಂದಿನ ಆದೇಶವು ಸಾರ್ವಜನಿಕವಾಗುವುದಕ್ಕೂ ಮೊದಲೇ ಹಲವಾರು ಪ್ರದೇಶಗಳಲ್ಲಿ ಅಧಿಕಾರಿಗಳು ಪ್ರಾಣಿಗಳನ್ನು ಎತ್ತಿಕೊಳ್ಳಲು ಏಕೆ ಪ್ರಾರಂಭಿಸಿದರು ಎಂದು ಕೇಳಿತು. ಪ್ರಾಣಿಗಳ ನಿಯಂತ್ರಣಕ್ಕಾಗಿ ಮಾರ್ಗಸೂಚಿಗಳನ್ನು ಜಾರಿಗೆ ತರದ ಅಧಿಕಾರಿಗಳ ವಿರುದ್ಧ ನ್ಯಾಯಾಲಯವು, ನಿಮ್ಮಗಳ ನಿರ್ಲಕ್ಷ್ಯದಿಂದಲೇ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಹೇಳಿತು.

ಆಗಸ್ಟ್ 11 ರಂದು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ದ್ವಿಸದಸ್ಯ ಪೀಠ ನೀಡಿದ ಆದೇಶವು ಭಾರಿ ವಿವಾದಕ್ಕೆ ಕಾರಣವಾದ ನಂತರ, ನೆನ್ನೆ ಬೆಳಿಗ್ಗೆ ನ್ಯಾಯಮೂರ್ತಿ ವಿಕ್ರಮ್ ನಾಥ್, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿತು. ವಸತಿ ಪ್ರದೇಶಗಳಿಂದ ಬೀದಿ ನಾಯಿಗಳನ್ನು ಹಿಡಿದು ಆಶ್ರಯ ಸ್ಥಳಗಳಿಗೆ ಸ್ಥಳಾಂತರಿಸುವ ಆದೇಶದ ವಿರುದ್ಧ ಪ್ರತಿಭಟನೆ ನಡೆಸಿದರು.

Kapil Dev
ಬೀದಿ ನಾಯಿ ಮುಕ್ತ ದೆಹಲಿ: 'ಇಡೀ ಸಮಸ್ಯೆಗೆ ನಿಮ್ಮ ನಿಷ್ಕ್ರಿಯತೆಯೇ ಕಾರಣ'; ಸ್ಥಳೀಯ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ತರಾಟೆ; ಸದ್ಯಕ್ಕಿಲ್ಲ ತಡೆಯಾಜ್ಞೆ!

ದೆಹಲಿ ಸರ್ಕಾರದ ಪರವಾಗಿ ಹಾಜರಾದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಿಂದ ಗಾಯಗಳು ಮತ್ತು ರೇಬೀಸ್ ಸಾವುಗಳು ಸಂಭವಿಸುತ್ತಿವೆ. ಮಕ್ಕಳು ಸಾಯುತ್ತಿದ್ದಾರೆ. ಕ್ರಿಮಿನಾಶಕವು ರೇಬೀಸ್ ಅನ್ನು ನಿಲ್ಲಿಸುವುದಿಲ್ಲ. ಯಾರೂ ಪ್ರಾಣಿಗಳ್ನು ದ್ವೇಷಿಸುವುದಿಲ್ಲ ಎಂದರು.

'100 ಜಾತಿಗಳಲ್ಲಿ ನಾಲ್ಕು ವಿಷಕಾರಿ ಜಾತಿಗಳಿವೆ. ನಾವು ಅವುಗಳನ್ನು ಮನೆಯಲ್ಲಿ ಸಾಕುವುದಿಲ್ಲ. ನಾಯಿಗಳನ್ನು ಕೊಲ್ಲಬೇಕಾಗಿಲ್ಲ; ಅವುಗಳನ್ನು ಬೇರ್ಪಡಿಸಬೇಕು' ಎಂದು ಅವರು ಕಳೆದ ವರ್ಷ 37 ಲಕ್ಷ ನಾಯಿ ಕಡಿತ ಪ್ರಕರಣಗಳ ಸರ್ಕಾರಿ ಡೇಟಾವನ್ನು ಉಲ್ಲೇಖಿಸಿ ಹೇಳಿದರು. 'ಪೋಷಕರು ತಮ್ಮ ಮಕ್ಕಳನ್ನು ಆಟವಾಡಲು ಕಳುಹಿಸಲು ಸಾಧ್ಯವಿಲ್ಲ. ಚಿಕ್ಕ ಮಕ್ಕಳನ್ನು ಅಂಗವಿಕಲಗೊಳಿಸಲಾಗುತ್ತಿದೆ. ಇದಕ್ಕೆ ಪರಿಹಾರವು ನಿಯಮಗಳಲ್ಲಿಲ್ಲ, ನ್ಯಾಯಾಲಯವು ಮಧ್ಯಪ್ರವೇಶಿಸಬೇಕು' ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com