ವಿರಾಟ್ ಕೊಹ್ಲಿ ಜೊತೆ ಹೋಲಿಸಲೇ ಬೇಡಿ; ರೋಹಿತ್ ಶರ್ಮಾ ಬಗ್ಗೆ ವಿರೇಂದ್ರ ಸೆಹ್ವಾಗ್ ಅಸಮಾಧಾನ

ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ಮೊಹಮ್ಮದ್ ಸಿರಾಜ್ ಅವರು ರೋಹಿತ್ ಅವರನ್ನು ಔಟ್ ಮಾಡಿದರು.
ರೋಹಿತ್ ಶರ್ಮಾ - ವಿರೇಂದ್ರ ಸೆಹ್ವಾಗ್
ರೋಹಿತ್ ಶರ್ಮಾ - ವಿರೇಂದ್ರ ಸೆಹ್ವಾಗ್
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರಾದ ರೋಹಿತ್ ಶರ್ಮಾ, ಇದೀಗ ಕಳಪೆ ಫಾರ್ಮ್‌ನಿಂದ ಮರಳಲು ಸಾಧ್ಯವಾಗುತ್ತಲೇ ಇಲ್ಲ. ಕಳೆದ ವರ್ಷ ಮುಂಬೈ ಇಂಡಿಯನ್ಸ್ ಪರ ಕಳಪೆ ಪ್ರದರ್ಶನದ ಬಳಿಕ, ಈ ಆವೃತ್ತಿಯಲ್ಲೂ ರೋಹಿತ್ ಶರ್ಮಾ ಅದನ್ನೇ ಮುಂದುವರಿಸಿದ್ದಾರೆ. ಮುಂಬೈ ಪರ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಕೇವಲ 8 ರನ್ ಗಳಿಸಿದ್ದಾರೆ.

ಶನಿವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ, ಮೊಹಮ್ಮದ್ ಸಿರಾಜ್ ಅವರು ರೋಹಿತ್ ಅವರನ್ನು ಔಟ್ ಮಾಡಿದರು. ಇದೀಗ, ರೋಹಿತ್ ಅವರ ಫಾರ್ಮ್‌ ಬಗ್ಗೆ ಅಭಿಮಾನಿಗಳು ಮತ್ತು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಹಲವು ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆದರೆ, ರೋಹಿತ್ ಶರ್ಮಾ ಅವರಿಗೆ ಐಪಿಎಲ್‌ನಲ್ಲಿ ಇದುವರೆಗೆ 700-800 ರನ್ ಗಳಿಸಲು ಏಕೆ ಸಾಧ್ಯವಾಗಿಲ್ಲ ಎಂದು ಭಾರತದ ಮಾಜಿ ಕ್ರಿಕೆಟಿಗರಾದ ಮನೋಜ್ ತಿವಾರಿ ಮತ್ತು ವೀರೇಂದ್ರ ಸೆಹ್ವಾಗ್ ಪ್ರಶ್ನಿಸಿದ್ದಾರೆ.

'ನೋಡಿ, ನಾನು ಕಠಿಣವಾಗಿರಲು ಬಯಸುವುದಿಲ್ಲ. ಆದರೆ, ನಾನು ಕಠಿಣವಾಗಿರಲೇಬೇಕು. ಕೆಲವು ಆಟಗಾರರಿಗೆ ನೀವು ಕಠಿಣವಾಗಿರಲೇಬೇಕು. ರೋಹಿತ್ ಶರ್ಮಾ ಮತ್ತೆ ರನ್ ಗಳಿಸುವ ಸಮಯ ಬಂದಿದೆ. ರೋಹಿತ್ ಶರ್ಮಾರಂತಹ ಆಟಗಾರನ ಸಾಮರ್ಥ್ಯ 400 ಅಲ್ಲ. ಕಳೆದ ಆವೃತ್ತಿಯಲ್ಲಿ ಅವರು 400 ರನ್ ಗಳಿಸಿದರು. ಶತಕ ಬಾರಿಸಿದರು ಅದು ಸರಿ. ಆದರೆ 800-900 ರನ್ ಗಳಿಸುವುದು ಯಾವ ಆವೃತ್ತಿಯಲ್ಲಿ? ರೋಹಿತ್ ಇಷ್ಟು ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ವಿರಾಟ್ ಕೊಹ್ಲಿ ಯಾವಾಗಲೂ ಏಕೆ ಸ್ಕೋರ್ ಮಾಡುತ್ತಾರೆ? ನೀವು ಹೇಳಿ. ಇದು ಒಳ್ಳೆಯದು, ಆದರೆ, ರೋಹಿತ್ ಯಾವ ಆವೃತ್ತಿಯಲ್ಲಿ 600-700 ರನ್ ಗಳಿಸುತ್ತಾರೆ' ಎಂದು ಮನೋಜ್ ತಿವಾರಿ ಕ್ರಿಕ್‌ಬಜ್‌ನಲ್ಲಿ ನಡೆದ ಚಾಟ್‌ನಲ್ಲಿ ಹೇಳಿದರು.

ರೋಹಿತ್ ಶರ್ಮಾ - ವಿರೇಂದ್ರ ಸೆಹ್ವಾಗ್
IPL 2025: ಪದೇ ಪದೇ ವೈಫಲ್ಯ; ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ವಾರ್ನಿಂಗ್!

'ರೋಹಿತ್ ಶರ್ಮಾ ಅವರು ಆರೆಂಜ್ ಕ್ಯಾಪ್ ಮಾಲೀಕರಾಗಬೇಕು. ಹೀಗಿರುವಾಗ, ಉತ್ತಮ ಆರಂಭ ಸಿಗದಿದ್ದರೆ ಹೇಗಿರುತ್ತದೆ? ನಾನು ಅವರಿಂದ ಬಹಳಷ್ಟು ನಿರೀಕ್ಷಿಸುತ್ತೇನೆ. ಅದಕ್ಕಾಗಿಯೇ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಕಳೆದ ವರ್ಷ ಉಂಟಾದ ನಾಯಕತ್ವದ ವಿಚಾರ ಮತ್ತು ವಿವಾದಗಳಿಂದಾಗಿ ರೋಹಿತ್ ತಂಡದಿಂದ ಹೊರಗುಳಿಯುತ್ತಾರೆ ಎಂದು ಅನಿಸಿತು. ಈ ಬಗ್ಗೆ ಆಡಿಯೋ ಕ್ಲಿಪ್‌ಗಳು ಹೊರಬಂದಿದ್ದವು. ಆದರೆ, ಅದರ ಹೊರತಾಗಿಯೂ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಲಾಯಿತು. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಯಾವುದೇ ರನ್‌ಗಳು ಬರದ ಕಾರಣ, ವಾತಾವರಣವು ಗೊಂದಲಮಯವಾಗಿರಬೇಕು' ಎಂದು ಅವರು ಹೇಳಿದರು.

ರೋಹಿತ್ ವಿರುದ್ಧ ವಾಗ್ದಾಳಿ ನಡೆಸಿದ ಸೆಹ್ವಾಗ್, ಮುಂಬೈ ಇಂಡಿಯನ್ಸ್ ಅಭಿಮಾನಿಗಳು ರೋಹಿತ್ ಅವರಿಂದ ಐಪಿಎಲ್ ಆವೃತ್ತಿಯೊಂದರಲ್ಲಿ 600-700 ರನ್‌ಗಳನ್ನು ನಿರೀಕ್ಷಿಸುತ್ತಾರೆ. ಆದರೆ, ಈಗಾಗಲೇ ಇದು ತುಂಬಾ ತಡವಾಗಿದೆ. ಹಿಟ್‌ಮ್ಯಾನ್ ತಮ್ಮ 18 ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಹಾಗೆ ಮಾಡಿಲ್ಲ' ಎಂದರು.

'ಮನೋಜ್ ತಿವಾರಿ ರೋಹಿತ್ ಶರ್ಮಾ ಬಗ್ಗೆ ಹೇಳಿದ ಆ ಆವೃತ್ತಿ ಎಲ್ಲಿದೆ? ಈ ರೀತಿಯ ಆವೃತ್ತಿ ಬರಲು ಈಗಾಗಲೇ ತಡವಾಗಿಲ್ಲವೇ? ನಾವು ಕೂಡ ಅವರ ಅಭಿಮಾನಿಗಳು. ಆದರೆ, ನಾವು 600-700 ರನ್‌ ಗಳಿಸುವ ಆವೃತ್ತಿ ಎಲ್ಲಿದೆ ಎಂದು ಕೇಳುತ್ತಿದ್ದೇವೆ. ರೋಹಿತ್ ಶರ್ಮಾ ಅದನ್ನು ಯಾವಾಗ ಮಾಡಿದ್ದಾರೆ? 18 ವರ್ಷಗಳು ಕಳೆದಿವೆ, 18 ವರ್ಷಗಳಲ್ಲಿ ಒಮ್ಮೆಯೂ ಇದು ಸಂಭವಿಸಿಲ್ಲ, ಅವರು ತಮ್ಮ ವೃತ್ತಿಜೀವನದ ಕೊನೆಯ ಭಾಗದಲ್ಲಿದ್ದಾಗ ಇದು ಸಂಭವಿಸುತ್ತದೆ ಎಂದು ನೀವು ಹೇಗೆ ಆಶಿಸಬಹುದು?' ಎಂದು ಸೆಹ್ವಾಗ್ ಕೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com