
ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ಗುರುವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವೆಸ್ಟ್ ಇಂಡೀಸ್ ಅನ್ನು 238 ರನ್ಗಳಿಂದ ಸೋಲಿಸಿದೆ. 53 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಐದು ಸಿಕ್ಸರ್ಗಳ ಸಹಾಯದಿಂದ 82 ರನ್ ಗಳಿಸಿದ ಜೇಕಬ್ ಬೆಥೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಶತಕದ ಮೂಲಕ ಇಂಗ್ಲೆಂಡ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 400 ರನ್ ಗಳಿಸಲು ಸಾಧ್ಯವಾಯಿತು.
ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಜೇಕಬ್ ಬೆಥೆಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಆವೃತ್ತಿಯಲ್ಲಿನ ತಮ್ಮ ಅನುಭವವನ್ನು ಮೆಲುಕು ಹಾಕಿದರು. ಎರಡು ತಿಂಗಳ ಹಿಂದೆ ಇದ್ದ ಆಟಗಾರನಿಗಿಂತ ಈಗ ಉತ್ತಮ ಆಟಗಾರನಾಗಿದ್ದೇನೆ ಎಂದು ಹೇಳಿದರು.
ವಿರಾಟ್ ಕೊಹ್ಲಿ ತಮ್ಮ ಅನುಭವಗಳನ್ನು ತಮ್ಮೊಂದಿಗೆ ಹಂಚಿಕೊಂಡ ಬಗ್ಗೆ ಮತ್ತು ಭಾರತದ ದಂತಕಥೆ ಮಾಹಿತಿಯನ್ನು ಹೇಗೆ ರವಾನಿಸಿದರು ಎಂಬುದರ ಕುರಿತು ಮಾತನಾಡಿದರು. ಬೆಥೆಲ್ ಐಪಿಎಲ್ 2025 ರ ಆವೃತ್ತಿಯಲ್ಲಿ ಆರ್ಸಿಬಿ ಪರವಾಗಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದು, 171.79 ರ ಸ್ಟ್ರೈಕ್ ರೇಟ್ನಲ್ಲಿ 67 ರನ್ ಗಳಿಸಿದ್ದಾರೆ.
ಜ್ವರದಿಂದಾಗಿ ಫಿಲ್ ಸಾಲ್ಟ್ ಪಂದ್ಯದಿಂದ ಹೊರಗುಳಿದ ಬಳಿಕ ಬೆಥೆಲ್ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ನೀಡಲಾಯಿತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಬೆಥೆಲ್ ಆಕರ್ಷಕ ಅರ್ಧಶತಕ ಗಳಿಸಿದರು.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯಗಳಿಗೆ ಮುಂಚಿತವಾಗಿ ಬೆಥೆಲ್ ಇಂಗ್ಲೆಂಡ್ಗೆ ಮರಳಿದರು. ಅವರ ಬದಲಿ ಆಟಗಾರನಾಗಿ ಆರ್ಸಿಬಿ ಪ್ಲೇಆಫ್ಗಳಿಗೆ ಟಿಮ್ ಸೀಫರ್ಟ್ ಅವರನ್ನು ಹೆಸರಿಸಿತು.
'ಆ ಅನುಭವವು ನನ್ನ ಆಟಕ್ಕೆ ನಿಜವಾಗಿಯೂ ಪ್ರಯೋಜನಕಾರಿ ಎಂದು ನಾನು ಕಂಡುಕೊಂಡೆ. ನಾನು ಭಾರತಕ್ಕೆ ಹೋಗುವ ಎರಡು ತಿಂಗಳ ಹಿಂದೆ ಇದ್ದದ್ದಕ್ಕಿಂತ ಈಗ ನಾನು ಉತ್ತಮ ಆಟಗಾರನಾಗಿದ್ದೇನೆ ಎಂದು ನನಗೆ ಅನಿಸುತ್ತದೆ. ಇತರ ಮಾಹಿತಿ ಮತ್ತು ಅವರು ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಎಂಬುದರ ಬಗ್ಗೆ ವಿರಾಟ್ ಕೊಹ್ಲಿ ಅವರು ನನಗೆ ನೀಡಿದ ಮಾಹಿತಿ ಅದ್ಭುತವಾಗಿತ್ತು' ಎಂದು ಬೆಥೆಲ್ ಸ್ಕೈ ಸ್ಪೋರ್ಟ್ಸ್ ಕ್ರಿಕೆಟ್ಗೆ ತಿಳಿಸಿದರು.
'ನಾನು ಕೇಳಬೇಕಿತ್ತು ಅಷ್ಟೇ ಮತ್ತು ಅವರು ಆ ವಿಷಯಗಳಲ್ಲಿ ಅದ್ಭುತವಾಗಿದ್ದರು. ನಿಸ್ಸಂಶಯವಾಗಿ, ಆ ಪಂದ್ಯಾವಳಿಯ ಭಾಗವಾಗುವುದು ನಿಜವಾಗಿಯೂ ವಿಶೇಷವಾಗಿತ್ತು. ಅದರ ಸುತ್ತಲೂ ಸಾಕಷ್ಟು ವಿಚಾರಗಳಿವೆ, ಆದ್ದರಿಂದ ಅದರ ಭಾಗವಾಗುವುದು ತುಂಬಾ ಸಂತೋಷವಾಯಿತು" ಎಂದು ಅವರು ಹೇಳಿದರು.
ಕೊಹ್ಲಿ ಜೊತೆ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಅವರು, 'ಆ ಶಕ್ತಿಯನ್ನು ನಿಜವಾಗಿಯೂ ನಾನು ಅನುಭವಿಸಿದ್ದೇನೆ ಮತ್ತು ಮುಂದೆ ತಮ್ಮ ಆಟದಲ್ಲಿ ತೀವ್ರತೆಯನ್ನು ಹೇಗೆ ಸೇರಿಸಿಕೊಳ್ಳಬೇಕೆಂದು ಕಲಿಯುತ್ತೇನೆ' ಎಂದು ಹೇಳಿದರು.
ಬಿಬಿಸಿ ಟೆಸ್ಟ್ ಮ್ಯಾಚ್ ಸ್ಪೆಷಲ್ನಲ್ಲಿ ಮಾತನಾಡಿದ ಬೆಥೆಲ್, 'ನಾನು ಆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ನಾನು ಯಾವಾಗಲೂ ಐಪಿಎಲ್ನಲ್ಲಿ ಇರುತ್ತೇನೆ ಎಂದು ಭಾವಿಸಿದ್ದೆ. ಆಟಗಾರರು ಉತ್ತಮವಾಗಿ ಆಡುವುದನ್ನು ದೂರದಿಂದಲೇ ನೋಡಿದೆ ಮತ್ತು ಅದನ್ನು ನಿಜವಾಗಿಯೂ ಆನಂದಿಸಿದೆ" ಎಂದು ಹೇಳಿದರು.
ವಿರಾಟ್ ಅದ್ಭುತವಾಗಿದ್ದರು. ಅವರು ನನ್ನೊಂದಿಗೆ ಬಹಳಷ್ಟು ಸಲಹೆಗಳನ್ನು ಹಂಚಿಕೊಳ್ಳಲು ಸಂತೋಷಪಟ್ಟರು ಮತ್ತು ಆಂಡಿ ಫ್ಲವರ್ ಕೂಡ ಉತ್ತಮ ತರಬೇತುದಾರರಾಗಿದ್ದರು. ನಾನು ವಿರಾಟ್ ಜೊತೆ ಬ್ಯಾಟಿಂಗ್ ಮಾಡಲು ಹೋದಾಗ ನನಗೆ ಆ ಶಕ್ತಿಯ ಅನುಭವವಾಯಿತು ಮತ್ತು ಆ ತೀವ್ರತೆಯನ್ನು ನಾನು ನನ್ನ ಆಟದಲ್ಲಿ ಅಳವಡಿಸಿಕೊಳ್ಳುತ್ತೇನೆ' ಎಂದು ಅವರು ಹೇಳಿದರು.
ಅದೇ ದಿನ, ಮುಲ್ಲನ್ಪುರದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸುವ ಮೂಲಕ ಆರ್ಸಿಬಿ ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿತು.
Advertisement