ಟಿ20 ವಿಶ್ವಕಪ್‌ಗೆ ಕಳಂಕ: ಚೆನ್ನೈ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ? ತನಿಖೆ ಕೈಗೊಂಡ ICC!

ಕ್ರಿಕೆಟ್ ಪ್ರಪಂಚದಿಂದ ಹೊರಬರುತ್ತಿರುವ ಸುದ್ದಿಗಳು ಕ್ರೀಡಾ ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿವೆ. ಭಾರತ ಮತ್ತು ಶ್ರೀಲಂಕಾ ಆಯೋಜಿಸಿದ್ದ 2026ರ ಟಿ20 ವಿಶ್ವಕಪ್ ಮೇಲೆ ಈಗ ಮ್ಯಾಚ್ ಫಿಕ್ಸಿಂಗ್‌ನ ಕರಾಳ ಮೋಡ ಆವರಿಸಿದೆ.
Representation purpose only
ಸಂಗ್ರಹ ಚಿತ್ರ
Updated on

ಕ್ರಿಕೆಟ್ ಪ್ರಪಂಚದಿಂದ ಹೊರಬರುತ್ತಿರುವ ಸುದ್ದಿಗಳು ಕ್ರೀಡಾ ಅಭಿಮಾನಿಗಳನ್ನು ಗೊಂದಲಕ್ಕೀಡುಮಾಡಿವೆ. ಭಾರತ ಮತ್ತು ಶ್ರೀಲಂಕಾ ಆಯೋಜಿಸಿದ್ದ 2026ರ ಟಿ20 ವಿಶ್ವಕಪ್ ಮೇಲೆ ಈಗ ಮ್ಯಾಚ್ ಫಿಕ್ಸಿಂಗ್‌ನ ಕರಾಳ ಮೋಡ ಆವರಿಸಿದೆ. ಟೂರ್ನಮೆಂಟ್‌ನ ನಿರ್ಣಾಯಕ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ವರದಿಗಳು ಸೂಚಿಸುತ್ತಿದ್ದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಭ್ರಷ್ಟಾಚಾರ ನಿಗ್ರಹ ಘಟಕ (ACU) ಆಳವಾದ ತನಿಖೆಯನ್ನು ಪ್ರಾರಂಭಿಸಿದೆ.

ಅನುಮಾನವನ್ನು ಹುಟ್ಟುಹಾಕಿದ ಪಂದ್ಯ

ಭಾರತವು 2026ರ ವಿಶ್ವಕಪ್‌ನ ಫೈನಲ್ ಅನ್ನು ಗೆದ್ದು, ಸತತ ಎರಡನೇ ಬಾರಿಗೆ ಚಾಂಪಿಯನ್ ತಂಡವಾಗಿತ್ತು. ಆದರೆ ಈ ಅದ್ಭುತ ಪ್ರಯಾಣದ ನಡುವೆ, ಫೆಬ್ರವರಿ 17ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ಮತ್ತು ಕೆನಡಾ ನಡುವೆ ಪಂದ್ಯ ನಡೆಯಿತು. ಈಗ, ಈ ಪಂದ್ಯದ ಬಗ್ಗೆ ಆಘಾತಕಾರಿ ವರದಿಗಳು ಹೊರಬರುತ್ತಿವೆ. ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ “ಭ್ರಷ್ಟಾಚಾರ, ಅಪರಾಧ ಮತ್ತು ಕ್ರಿಕೆಟ್” ಎಂಬ ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಪ್ರಸಾರ ಮಾಡಿತ್ತು. ಈ ಸಾಕ್ಷ್ಯಚಿತ್ರ ಪ್ರಸಾರವಾದ ಬಳಿಕ ಇದೀಗ ಐಸಿಸಿ ಈ ಬಗ್ಗೆ ತನಿಖೆ ಪ್ರಾರಂಭಿಸಿದೆ.

ಪಂದ್ಯವನ್ನೇ ಬದಲಾಯಿಸಿದ ಒಂದು ಓವರ್

ತನಿಖೆಯ ಕೇಂದ್ರಬಿಂದು ನ್ಯೂಜಿಲೆಂಡ್ ಇನ್ನಿಂಗ್ಸ್‌ನ ಐದನೇ ಓವರ್. ಈ ಓವರ್ ಅನ್ನು ಕೆನಡಾ ನಾಯಕ ದಿಲ್‌ಪ್ರೀತ್ ಬಜ್ವಾ ಬೌಲ್ ಮಾಡಿದ್ದರು. ಟೂರ್ನಮೆಂಟ್ ಆರಂಭವಾಗುವ ಕೇವಲ ಮೂರು ವಾರಗಳ ಮೊದಲು ಬಾಜ್ವಾ ಅವರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಬಾಜ್ವಾ ನೋ-ಬಾಲ್ ಮತ್ತು ವೈಡ್‌ನೊಂದಿಗೆ ಆಟ ಆರಂಭಿಸಿದರು. ಅವರು ಇಡೀ ಓವರ್‌ನಲ್ಲಿ 15 ರನ್‌ಗಳನ್ನು ಬಿಟ್ಟುಕೊಟ್ಟರು. ನ್ಯೂಜಿಲೆಂಡ್ ಕೇವಲ 15.1 ಓವರ್‌ಗಳಲ್ಲಿ ಯಾವುದೇ ವಿಕೆಟ್‌ಗಳನ್ನು ಕಳೆದುಕೊಳ್ಳದೆ 174 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಿತು.

Representation purpose only
ಗುರುಗ್ರಾಮದಲ್ಲಿ ವಿಸ್ಕಿ ಪ್ರಚಾರ ಮಾಡಿದ ಐಪಿಎಲ್ ಕಮೆಂಟೇಟರ್ ಕೆವಿನ್ ಪೀಟರ್ಸನ್; ವಿಡಿಯೋ ವೈರಲ್

ಈ ವಿಷಯವು ಕೇವಲ ಒಂದು ಓವರ್‌ಗೆ ಸೀಮಿತವಾಗಿಲ್ಲ. ಕೆನಡಾದ ಮಾಜಿ ಕೋಚ್ ಖುರ್ರಾಮ್ ಚೌಹಾಣ್ ಒಳಗೊಂಡ ರೆಕಾರ್ಡ್ ಮಾಡಿದ ಫೋನ್ ಕರೆಯ ಬಗ್ಗೆಯೂ ಐಸಿಸಿ ತನಿಖೆ ನಡೆಸುತ್ತಿದೆ. ಕ್ರಿಕೆಟ್ ಕೆನಡಾದ ಹಿರಿಯ ಮಂಡಳಿಯ ಸದಸ್ಯರು ತಂಡಕ್ಕೆ ಕೆಲವು ಆಟಗಾರರನ್ನು ಆಯ್ಕೆ ಮಾಡುವಂತೆ ಒತ್ತಡ ಹೇರಿದ್ದಾರೆ ಎಂದು ಚೌಹಾಣ್ ಆರೋಪಿಸಿದ್ದಾರೆ. ಪಂದ್ಯವನ್ನು ಫಿಕ್ಸ್ ಮಾಡಲು ಪ್ರಯತ್ನಗಳು ನಡೆದಿವೆ ಎಂದು ಅವರು ಹೇಳಿದ್ದಾರೆ.

ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕವು ಸಾಕ್ಷ್ಯಚಿತ್ರ ಮತ್ತು ಆರೋಪಗಳ ಬಗ್ಗೆ ತಿಳಿದಿದೆ ಎಂದು ಒಪ್ಪಿಕೊಂಡಿದೆ. ಆದಾಗ್ಯೂ, ಅದರ ಕಾರ್ಯವಿಧಾನಗಳನ್ನು ಉಲ್ಲೇಖಿಸಿ, ಯಾವುದೇ ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ. ಐಸಿಸಿ ತನ್ನ ಸಾಂವಿಧಾನಿಕ ಚೌಕಟ್ಟಿನೊಳಗೆ ಈ ಆಡಳಿತ ಮತ್ತು ಭ್ರಷ್ಟಾಚಾರ ವಿಷಯಗಳನ್ನು ತನಿಖೆ ಮಾಡುತ್ತಿದೆ ಎಂದು ಹೇಳುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com