T20 World Cup 2026: 'ಇದು ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದು, ಆದರೆ...'; ಟೀಂ ಇಂಡಿಯಾ ಬಗ್ಗೆ ಎಂಎಸ್ ಧೋನಿ

ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅಪಾಯಕಾರಿ ತಂಡ ಎಂದು ಹೇಳುತ್ತಲೇ, ಟಿ20 ಸ್ವರೂಪ ಎಷ್ಟು ಅನಿರೀಕ್ಷಿತ ಎಂಬುದನ್ನು ಧೋನಿ ಎತ್ತಿ ತೋರಿಸಿದರು.
MS Dhoni
ಎಂಎಸ್ ಧೋನಿ
Updated on

ಈ ವಾರದ ಕೊನೆಯಲ್ಲಿ, ಭಾರತ ತಂಡವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಯುಎಸ್ಎ ವಿರುದ್ಧದ ಪಂದ್ಯದೊಂದಿಗೆ ತಮ್ಮ ಟಿ20 ವಿಶ್ವಕಪ್ 2026ರ ಅಭಿಯಾನವನ್ನು ಆರಂಭಿಸಲಿದೆ. ಸೂರ್ಯಕುಮಾರ್ ಯಾದವ್ ಮತ್ತು ತಂಡವು ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಆಡಲಿದ್ದು, 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಪ್ರಶಸ್ತಿಯನ್ನು ಗೆದ್ದಿತ್ತು. 2007ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಉದ್ಘಾಟನಾ ಆವೃತ್ತಿಯನ್ನು ಗೆದ್ದಿದ್ದ ಭಾರತಕ್ಕೆ ಇದು ಎರಡನೇ ಪ್ರಶಸ್ತಿಯಾಗಿದೆ. ಭಾರತ ದಾಖಲೆಯ ಮೂರನೇ ಪ್ರಶಸ್ತಿಗಾಗಿ ಎದುರು ನೋಡುತ್ತಿದ್ದು, ಸದ್ಯಕ್ಕೆ ಟೀಂ ಇಂಡಿಯಾ 'ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆ'. ಆದರೆ, ಮೈದಾನದಲ್ಲಿನ ಇಬ್ಬನಿ ಭಾರತಕ್ಕೆ ಕಳವಳಕಾರಿಯಾಗಬಹುದು ಎಂದು ಕ್ಯಾಪ್ಟನ್ ಕೂಲ್ ಹೇಳಿದ್ದಾರೆ.

'ಇದು ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆ. ತಂಡ ಈಗಾಗಲೇ ಬ್ಯಾಟಿಂಗ್ ಅಥವಾ ಬೌಲಿಂಗ್ ಎರಡರಲ್ಲೂ ಉತ್ತಮವಾಗಿದೆ. ಉತ್ತಮ ತಂಡಕ್ಕೆ ಏನೆಲ್ಲಾ ಬೇಕೋ ಅದೆಲ್ಲವೂ ಸದ್ಯ ಭಾರತ ತಂಡದಲ್ಲಿದೆ. ಅವರಿಗೆ ಅನುಭವವಿದೆ. ವಿಶೇಷವಾಗಿ ಈ ಸ್ವರೂಪಕ್ಕೆ ಬಂದಾಗ, ಅನುಭವವು ವಿಶಾಲವಾಗಿದೆ. ಅವರು ಒತ್ತಡದಲ್ಲಿ ಆಡಿದ್ದಾರೆ. ತಂಡದಲ್ಲಿ ಅವರು ಯಾವುದೇ ಪಾತ್ರಗಳನ್ನು ನಿರ್ವಹಿಸುತ್ತಿದ್ದರೂ, ಅವರು ಹೆಚ್ಚಿನ ಸಮಯದಿಂದ ಆ ಪರಿಸ್ಥಿತಿಯಲ್ಲಿದ್ದಾರೆ' ಎಂದು ಧೋನಿ ಮಹಿ ಅನ್‌ಪ್ಲಗ್ಡ್‌ನಲ್ಲಿ ಹೇಳಿದರು.

'ನನಗಿರುವ ಏಕೈಕ ಚಿಂತೆ ಎಂದರೆ, ಇಬ್ಬನಿ. ನಾನು ಇಬ್ಬನಿಯನ್ನು ದ್ವೇಷಿಸುತ್ತೇನೆ. ಇಬ್ಬನಿ ಬಹಳಷ್ಟು ವಿಷಯಗಳನ್ನು ಬದಲಾಯಿಸುತ್ತದೆ. ಹಾಗಾಗಿ, ನಾನು ಆಡುತ್ತಿರುವಾಗಲೂ, ನನಗೆ ನಿಜವಾಗಿಯೂ ಭಯ ಹುಟ್ಟಿಸಿದ್ದು ಇಬ್ಬನಿ. ಅಲ್ಲಿ ಟಾಸ್ ಮತ್ತು ಎಲ್ಲವೂ ನಿರ್ಣಾಯಕವಾಗಿರುತ್ತದೆ. ತಟಸ್ಥ ಪರಿಸ್ಥಿತಿಗಳಲ್ಲಿ ಅಗ್ರ ತಂಡಗಳ ವಿರುದ್ಧ ಸುಮಾರು 10 ಪಂದ್ಯಗಳನ್ನು ಆಡಿದರೆ, ತಂಡವು ಹೆಚ್ಚಿನ ಪಂದ್ಯಗಳನ್ನು ಗೆಲ್ಲುತ್ತದೆ' ಎಂದು ಅವರು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಭಾರತ ಅಪಾಯಕಾರಿ ತಂಡ ಎಂದು ಹೇಳುತ್ತಲೇ, ಟಿ20 ಸ್ವರೂಪ ಎಷ್ಟು ಅನಿರೀಕ್ಷಿತ ಎಂಬುದನ್ನು ಧೋನಿ ಎತ್ತಿ ತೋರಿಸಿದರು.

MS Dhoni
T20 ವಿಶ್ವಕಪ್ 2026: ಟೂರ್ನಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ 2 ಅಂಕ, ಆದ್ರೆ ಷರತ್ತು ಅನ್ವಯ!

'ಸಮಸ್ಯೆ ಏನೆಂದರೆ, ನಿಮ್ಮ ಕೆಲವು ಆಟಗಾರರು ನಿರ್ದಿಷ್ಟ ದಿನದಂದು ಕಳಪೆ ಪ್ರದರ್ಶನ ನೀಡಿದಾಗ ಮತ್ತು ಎದುರಾಳಿ ತಂಡವು ಶ್ರೇಷ್ಠ ಪ್ರದರ್ಶನ ನೀಡಿದಾಗ ತೊಂದರೆ ಉಂಟಾಗುತ್ತದೆ. ಇದು T20 ಗುಂಪು ಪಂದ್ಯಗಳಲ್ಲಿ ಸುಲಭವಾಗಿ ಸಂಭವಿಸಬಹುದು ಮತ್ತು ಫಲಿತಾಂಶವನ್ನು ತ್ವರಿತವಾಗಿ ಬದಲಿಸಬಹುದು. ಲೀಗ್ ಹಂತದಲ್ಲಿ ಆಗಲಿ, ನಾಕೌಟ್ ಹಂತದಲ್ಲಿ ಆಗಲಿ, ಎಲ್ಲ ಪ್ರಾರ್ಥನೆಗಳು ಬೇಕಾಗುತ್ತವೆ. ಯಾರಿಗೂ ಗಾಯವಾಗಬಾರದು. ಯಾವುದೇ ಪಾತ್ರಗಳನ್ನು ನೀಡಿದರೂ, ಅವರು ತಂಡಕ್ಕಾಗಿ ಅದನ್ನು ಪೂರೈಸುವಂತಾಗಬೇಕು' ಎಂದರು.

'ಹಾಗೇನಾದರೂ ಆದಲ್ಲಿ, ನಾನು ಏನನ್ನೂ ಹೇಳುವ ಮೂಲಕ ಅದನ್ನು ಅಪಹಾಸ್ಯ ಮಾಡಲು ಬಯಸುವುದಿಲ್ಲ. ಆದರೆ ಇದು ಅತ್ಯಂತ ಅಪಾಯಕಾರಿ ತಂಡಗಳಲ್ಲಿ ಒಂದಾಗಿದೆ' ಎಂದು ಧೋನಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com