T20 World Cup 2026: ಟೀಂ ಇಂಡಿಯಾಗೆ ಸಂಕಷ್ಟ; ಪಂದ್ಯಾವಳಿಯಿಂದಲೇ ಹೊರಗುಳಿದ ಹರ್ಷಿತ್ ರಾಣಾ!

'ಹರ್ಷಿತ್ ಅವರನ್ನು ಹೊರಗಿಟ್ಟರೆ, ತಂಡಕ್ಕೆ ಅದು ದೊಡ್ಡ ಹೊಡೆತವಾಗುತ್ತದೆ. ನಾವು ಇತರ ಸಂಯೋಜನೆಗಳನ್ನು ನೋಡಬೇಕಾಗುತ್ತದೆ. ಆದರೆ, ನಮಗೆ ಸಾಕಷ್ಟು ಬೆಂಚ್ ಬಲವಿದೆ' ಎಂದು ನಾಯಕ ಸೂರ್ಯಕುಮಾರ್ ಯಾದವ್ ಹೇಳಿದರು.
Harshit Rana
ಹರ್ಷಿತ್ ರಾಣಾ
Updated on

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಗಾಯದ ಕಾರಣದಿಂದಾಗಿ 2026ರ ಟಿ20 ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಭಾರತದ ಅಭ್ಯಾಸ ಪಂದ್ಯದ ವೇಳೆ ಹರ್ಷಿತ್ ಗಾಯಗೊಂಡಿದ್ದರು. ಅಭ್ಯಾಸ ಪಂದ್ಯದ ಸಮಯದಲ್ಲಿ ಹರ್ಷಿತ್ ಕುಂಟುತ್ತಾ ಮೈದಾನದಿಂದ ಹೊರನಡೆದಿದ್ದರು ಮತ್ತು ಅವರು ಕೀಲು ನೋವಿನಿಂದ ಬಳಲುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತದ ಪರ ಹರ್ಷಿತ್ ಒಂದೇ ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟಿದ್ದರು. ಫೆಬ್ರುವರಿ 7ರಿಂದ ಆರಂಭವಾಗುವ ಪಂದ್ಯಾವಳಿಯಲ್ಲಿ ಭಾರತವು ಮೊದಲ ಪಂದ್ಯದಲ್ಲಿ ಯುಎಸ್‌ಎ ವಿರುದ್ಧ ಆಡಲಿದೆ. 'ಹರ್ಷಿತ್ ಉತ್ತಮವಾಗಿ ಕಾಣುತ್ತಿಲ್ಲ. ಈ ಬಗ್ಗೆ ಇಂದು ನಮಗೆ ತಿಳಿಯುತ್ತದೆ' ಎಂದು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದರು.

'ಹರ್ಷಿತ್ ಅವರನ್ನು ಹೊರಗಿಟ್ಟರೆ, ತಂಡಕ್ಕೆ ಅದು ದೊಡ್ಡ ಹೊಡೆತವಾಗುತ್ತದೆ. ನಾವು ಇತರ ಸಂಯೋಜನೆಗಳನ್ನು ನೋಡಬೇಕಾಗುತ್ತದೆ. ಆದರೆ, ನಮಗೆ ಸಾಕಷ್ಟು ಬೆಂಚ್ ಬಲವಿದೆ' ಎಂದು ಹೇಳಿದರು.

ಅವರ ಸಂಭಾವ್ಯ ಬದಲಿ ಆಟಗಾರರ ಬಗ್ಗೆ ಕೇಳಿದಾಗ, ತಂಡಕ್ಕೆ ಮತ್ತೊಬ್ಬ ಆಲ್‌ರೌಂಡರ್ ಸೇರಿಸಿಕೊಳ್ಳುವ ಅಗತ್ಯವಿಲ್ಲ. ನೋಡೋಣ. ಅವರು ಆಲ್‌ರೌಂಡರ್ ಆಗಿರಬೇಕು ಎಂಬ ಕಠಿಣ ನಿಯಮವಿಲ್ಲ ಎಂದು ಅವರು ಟಿ20 ವಿಶ್ವಕಪ್ ಉದ್ಘಾಟನಾ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Harshit Rana
T20 ವಿಶ್ವಕಪ್: ಭಾರತ ವಿರುದ್ಧದ ಪಂದ್ಯ ಆಡಲು ಪಾಕ್ ನಕಾರ; ಸೂರ್ಯ ಕುಮಾರ್ ಯಾದವ್ ನಿಲುವು ಏನು?

ಟಿ20 ವಿಶ್ವಕಪ್ 2026 (ಹರ್ಷಿತ್ ರಾಣಾ ಗಾಯಕ್ಕೂ ಮೊದಲು)

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com