'ಅದಿತಿಯೇ ಅವನ ಗರ್ಲ್‌ಫ್ರೆಂಡ್': ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸಮನ್‌ ಇಶಾನ್ ಕಿಶನ್ ಬಗ್ಗೆ ತಾತ ಹೇಳಿದ್ದಿಷ್ಟು...

'ಇಶಾನ್ ಯಾರನ್ನು ಮದುವೆಯಾಗಲು ಆರಿಸಿಕೊಂಡರೂ, ಅವನ ನಿರ್ಧಾರವನ್ನು ನಾನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಶಾನ್ ಕಿಶಾನ್ ಯಾರನ್ನೇ ಮದುವೆಯಾದರೂ ನಾವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೇವೆ'.
Aditi Hundia - Ishan Kishan
ಅದಿತಿ ಹುಂಡಿಯಾ - ಇಶಾನ್ ಕಿಶನ್
Updated on

ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ತಂಡಕ್ಕೆ ಮರಳಿದ ಬಳಿಕ ಭರ್ಜರಿ ಫಾರ್ಮ್‌ನಲ್ಲಿದ್ದು, ಎಲ್ಲರ ಗಮನ ಸೆಳೆದಿದ್ದಾರೆ. ಸುಮಾರು ಎರಡು ವರ್ಷಗಳ ಕಾಲ ರಾಷ್ಟ್ರೀಯ ತಂಡದಿಂದ ದೂರವಿದ್ದ ಅವರು, ಬಿಸಿಸಿಐ ಸೆಂಟ್ರಲ್ ಒಪ್ಪಂದವನ್ನು ಕಳೆದುಕೊಂಡಿದ್ದರು. ಇದೀಗ 27 ವರ್ಷದ ಇಶಾನ್ ಕಿಶನ್ ಮರಳಿ ತಮ್ಮ ಸಾಮರ್ಥ್ಯ ಏನೆಂಬುದನ್ನು ಸಾಭೀತುಪಡಿಸಿದ್ದಾರೆ. ಇದೀಗ ಕ್ರಿಕೆಟ್‌ ಹೊರತುಪಡಿಸಿ ತಮ್ಮ ವೈಯಕ್ತಿಕ ಕಾರಣಕ್ಕಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಭಾನುವಾರ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 77 ರನ್‌ಗಳನ್ನು ಗಳಿಸುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಭಾರತವು 61 ರನ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ, ಕಿಶನ್ ಅವರ ತಾತ ಅವರ ರಿಲೇಷನ್‌ಶಿಪ್‌ ಬಗ್ಗೆ ಮಾಹಿತಿ ನೀಡಿದ್ದು, ವರ್ಷಗಳ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬಿಹಾರದ ಔರಂಗಾಬಾದ್‌ನಲ್ಲಿ ಸುದ್ದಿ ಸಂಸ್ಥೆ ANI ಜೊತೆ ಮಾತನಾಡಿದ ಕಿಶನ್ ಅವರ ತಾತ ಅನುರಾಗ್ ಪಾಂಡೆ, ತಮ್ಮ ಮೊಮ್ಮಗ ಸದ್ಯ ಮಾಡೆಲ್ ಅದಿತಿ ಹುಂಡಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ದೃಢಪಡಿಸಿದರು.

'ಇಶಾನ್ ಯಾರನ್ನು ಮದುವೆಯಾಗಲು ಆರಿಸಿಕೊಂಡರೂ, ಅವನ ನಿರ್ಧಾರವನ್ನು ನಾನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಇಶಾನ್ ಕಿಶಾನ್ ಯಾರನ್ನೇ ಮದುವೆಯಾದರೂ ನಾವು ಅವರನ್ನು ಸ್ವೀಕರಿಸಲು ಸಿದ್ಧರಿದ್ದೇವೆ. ಅದಿತಿ ಅವನ ಗೆಳತಿ. ಅವರು ಒಬ್ಬ ಮಾಡೆಲ್. ಮಕ್ಕಳು ಸಂತೋಷವಾಗಿರುವುದನ್ನು ನಾವು ಒಪ್ಪಿಕೊಳ್ಳಬೇಕು' ಎಂದರು.

Aditi Hundia - Ishan Kishan
T20 World Cup 2026: 27 ಬಾಲ್ ಗಳಲ್ಲಿ ಅರ್ಧಶತಕ ಹೊಡೆದು, ಭಾರತದ ಸ್ಕೋರ್ ಹೆಚ್ಚಿಸಿದ ಇಶಾನ್ ಕಿಶಾನ್!

ಈಮಧ್ಯೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿನ ಪ್ರದರ್ಶನದ ಬಗ್ಗೆ ಮಾತನಾಡಿದ ಕಿಶನ್, 'ಈ ಪಂದ್ಯವೂ ಮತ್ತೊಂದು ಆಟವಷ್ಟೇ ಎಂದು ಪರಿಗಣಿಸಿ, ಸರಣವಾಗಿಟ್ಟುಕೊಂಡೆ. ಚೆಂಡನ್ನು ನೋಡುತ್ತಾ ಮತ್ತು ವಿಕೆಟ್ ಮತ್ತು ಗುರಿಯನ್ನು ನಿರ್ಣಯಿಸಿದ ನಂತರ ತನ್ನ ಹೊಡೆತಗಳನ್ನು ಆಡುತ್ತಿದ್ದೇನೆ' ಎಂದು ಹೇಳಿದರು.

ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಇಶಾನ್ ಕಿಶನ್, 'ನನಗೆ ಮಾತ್ರವಲ್ಲ, ಪಂದ್ಯಾವಳಿಯ ಉದ್ದಕ್ಕೂ, ನಾವು ತುಂಬಾ ಕಠಿಣ ತಯಾರಿ ನಡೆಸುತ್ತಿದ್ದಾಗ ನಮಗೆ ಬೆಂಬಲ ನೀಡಿದ ಎಲ್ಲರಿಗೂ ಈ ಗೆಲುವನ್ನು ಸಮರ್ಪಿಸುತ್ತೇನೆ. ಆದ್ದರಿಂದ, ಇದರ ಶ್ರೇಯ ನನಗೆ ಮಾತ್ರವಲ್ಲ, ಇಡೀ ಭಾರತಕ್ಕೂ ಸಲ್ಲುತ್ತದೆ' ಎಂದು ಹೇಳಿದ್ದಾರೆ.

'ನಾನು ಅದನ್ನು ಸರಳವಾಗಿ ಇಟ್ಟುಕೊಂಡಿದ್ದೇನೆ ಎಂದು ನಾನು ಭಾವಿಸುತ್ತೇನೆ. ಆ ದಿನದ ಆರಂಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದಂತೆ, ಇದು ಕೇವಲ ಮತ್ತೊಂದು ಆಟ. ನೀವು ಚೆಂಡನ್ನು ನೋಡಬೇಕು ಮತ್ತು ನಿಮ್ಮ ಹೊಡೆತಗಳನ್ನು ಆಡಬೇಕು. ನೀವು ವಿಕೆಟ್ ಹೇಗೆ ವರ್ತಿಸುತ್ತದೆ ಎಂಬುದನ್ನು ನಿರ್ಣಯಿಸಬೇಕು ಮತ್ತು ನಮ್ಮ ತಂಡಕ್ಕೆ ಎಷ್ಟು ಮೊತ್ತ ಉತ್ತಮ ಎಂಬುದನ್ನು ನಿರ್ಣಯಿಸಬೇಕು. ನಾವು ಆ ಯೋಜನೆಯನ್ನು ಹೊಂದಿದ್ದೆವು ಮತ್ತು ಅದು ನನಗೆ ಹೆಚ್ಚಿನ ಆತ್ಮವಿಶ್ವಾಸ ನೀಡುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಪಂದ್ಯದ ಮೊದಲು ಅಥವಾ ಪಂದ್ಯಗಳ ನಡುವೆ ಯಾವುದರ ಬಗ್ಗೆಯೂ ಭಯವಿರಲಿಲ್ಲ. ನಾನು ಅದನ್ನು ಸರಳವಾಗಿ ಇಟ್ಟುಕೊಂಡು ನನ್ನ ಹೊಡೆತಗಳನ್ನು ಆಡುತ್ತಿದ್ದೆ' ಎಂದು ತಿಳಿಸಿದರು.

'ಇಲ್ಲ, ಇನ್ನೂ ಕೆಲಸ ಮುಗಿದಿಲ್ಲ ಎಂದು ನಾನು ಭಾವಿಸುತ್ತೇನೆ. ಹಾಗಾಗಿ, ನಾನು ತುಂಬಾ ತೃಪ್ತಿ ಹೊಂದಿದ್ದೇನೆ ಎಂದು ನಾನು ಹೇಳುವುದಿಲ್ಲ. ನಾವು ಇದನ್ನು ಮರೆತು ಮುಂದಿನ ಆಟಕ್ಕೆ ತೆಗೆದುಕೊಂಡು ಹೋಗಬೇಕು' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com