ನವದೆಹಲಿ: ಟಿ20ಐ ಸರಣಿ ಸೋಲಿಗೆ ಆಟಗಾರರನ್ನು ದೂಷಿಸುವ ಬದಲು, ಐಪಿಎಲ್ನಲ್ಲಿನ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕು. ಭಾರತ ವಿದೇಶದಲ್ಲಿ ಸಾಕಷ್ಟು ಕ್ರಿಕೆಟ್ ಆಡಲಿದ್ದು, ಆಯ್ಕೆದಾರರು 'ಐಪಿಎಲ್ ಮೇಕಪ್' ಇಲ್ಲದೆ ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ಭಾರತದ ಮಾಜಿ ಬ್ಯಾಟ್ಸ್ಮನ್ ಸಂಜಯ್ ಮಂಜ್ರೇಕರ್ ಹೇಳಿದರು.
ಟಿ20 ವಿಶ್ವಕಪ್ ಹಾಲಿ ಚಾಂಪಿಯನ್ಗಳು ಐರ್ಲೆಂಡ್ ವಿರುದ್ಧ 0-2 ಅಂತರದಲ್ಲಿ ಸೋತರು ಮತ್ತು ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಸೋತರು, ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಕಳೆದ ಮೂರು ವರ್ಷಗಳಲ್ಲಿ ಭಾರತಕ್ಕೆ ಎದುರಾದ ಮೊದಲ T20I ಸರಣಿ ಅಥವಾ ಟೂರ್ನಿ ಸೋಲು ಇದಾಗಿದೆ.
'ವಿದೇಶದಲ್ಲಿನ ಈ T20 ಹಿನ್ನಡೆಗೆ ಆಟಗಾರರನ್ನು ಹೊಣೆಗಾರರನ್ನಾಗಿಸುವುದು ಸುಲಭದ ಕೆಲಸ. ಆದರೆ, ಭಾರತೀಯ ಬ್ಯಾಟರ್ಗಳ ವಾಸ್ತವ ಸಾಮರ್ಥ್ಯವನ್ನು ಮರೆಮಾಚಿ ಅವರ ಮೇಲೆ ಕೃತಕ ಹೊಳಪನ್ನು (heavy make-up) ತರುವಂತಹ ರೀತಿಯಲ್ಲಿ ಐಪಿಎಲ್ (IPL) ಅನ್ನು ರೂಪಿಸಿರುವವರನ್ನು ಹೊಣೆಗಾರರನ್ನಾಗಿಸುವುದೇ ಸರಿಯಾದ ಕ್ರಮ' ಎಂದು ಮಂಜ್ರೇಕರ್ 'X'ನಲ್ಲಿನ ಪೋಸ್ಟ್ನಲ್ಲಿ ಬರೆದಿದ್ದಾರೆ.
'ಐಪಿಎಲ್ನ ಭಾರಿ ಪ್ರಭಾವದ ಲೇಪನವಿಲ್ಲದೆ ಭಾರತೀಯ ಬ್ಯಾಟರ್ಗಳನ್ನು ಪರಿಗಣಿಸಿ, ಕೇವಲ ಅರ್ಹ ಆಟಗಾರರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುವುದು ಆಯ್ಕೆಗಾರರ ಮುಂದಿರುವ ಸವಾಲಾಗಿದೆ. ಇನ್ನು ಮುಂದೆ ಹೆಚ್ಚಿನ ಟಿ20 ಕ್ರಿಕೆಟ್ ಪಂದ್ಯಗಳು ವಿದೇಶಗಳಲ್ಲಿ ನಡೆಯಲಿವೆ; ತವರಿನನಲ್ಲಿ ನಡೆಯುವ ಸುಲಭದ ಹಂತ ಮುಗಿದಿದೆ' ಎಂದರು.
ಟಿ20 ಸರಣಿ ನಂತರ, ಭಾರತವು ಇಂಗ್ಲೆಂಡ್ನಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ; ನಂತರ ಜುಲೈ 23ರಿಂದ ಆರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.
ಹಾಲಿ ಚಾಂಪಿಯನ್ ತಂಡವು ಅಕ್ಟೋಬರ್-ನವೆಂಬರ್ನಲ್ಲಿ ನ್ಯೂಜಿಲೆಂಡ್ಗೆ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ಎರಡು ಟೆಸ್ಟ್ಗಳ ಜೊತೆಗೆ ಐದು ಟಿ20 ಮತ್ತು ಐದು ಏಕದಿನ ಪಂದ್ಯಗಳನ್ನು ಒಳಗೊಂಡಿರುತ್ತದೆ.
ಐಪಿಎಲ್ ಬೌಲರ್ಗಳಿಗೆ ಸೀಮಿತ ನೆರವಿನೊಂದಿಗೆ ಬ್ಯಾಟಿಂಗ್ ಸ್ನೇಹಿ ಪಿಚ್ಗಳನ್ನು ನೀಡುತ್ತಿದೆ. ಇದು ಸಾಂಪ್ರದಾಯಿಕ ಸ್ಟ್ರೋಕ್-ಮೇಕಿಂಗ್ಗಿಂತ ಪವರ್-ಹಿಟ್ಟಿಂಗ್ ಅನ್ನು ಪ್ರೋತ್ಸಾಹಿಸುತ್ತದೆ ಎಂಬ ಟೀಕೆಗೆ ಒಳಗಾಗಿದೆ.
ಐಪಿಎಲ್ನ ಸಣ್ಣ ಮೈದಾನಗಳು ಮತ್ತು ಬ್ಯಾಟಿಂಗ್ ಸ್ನೇಹಿ ಪಿಚ್ಗಳು ಬ್ಯಾಟ್ಸ್ಮನ್ಗಳನ್ನು ದೀರ್ಘ, ತಾಳ್ಮೆಯ ಇನಿಂಗ್ಸ್ಗಳನ್ನು ನಿರ್ಮಿಸಲು ಕಲಿಯುವ ಬದಲು ದೊಡ್ಡ ಹೊಡೆತಗಳ ಮೇಲೆ ಅವಲಂಬಿತರಾಗಲು ಪ್ರೋತ್ಸಾಹಿಸುತ್ತವೆ. ಅದರ ಪರಿಣಾಮವಾಗಿ, ಅವರು ವಿದೇಶಗಳಲ್ಲಿ ಆಡುವಾಗ (ಅಲ್ಲಿ ಪಿಚ್ಗಳು ಹೆಚ್ಚು ಸ್ವಿಂಗ್ ಮತ್ತು ಸೀಮ್ ಚಲನೆಯನ್ನು ನೀಡುತ್ತವೆ) ಅವರು ಹೊಂದಿಕೊಳ್ಳಲು ಹೆಣಗಾಡುತ್ತಾರೆ ಎಂದು ವಿಮರ್ಶಕರು ವಾದಿಸಿದ್ದಾರೆ.
ತಂಡಗಳು ನಿಯಮಿತವಾಗಿ ಸ್ಪೆಷಲಿಸ್ಟ್ ಬೌಲರ್ ಬದಲಿಗೆ ಸ್ಪೆಷಲಿಸ್ಟ್ ಬ್ಯಾಟರ್ ಅನ್ನು ಕರೆತರುವುದರಿಂದ ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಗುಣಮಟ್ಟದ ಆಲ್ರೌಂಡರ್ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಟೀಕಿಸಲಾಗಿದೆ.
ಮಾಜಿ ವಿಕೆಟ್-ಕೀಪರ್ ಬ್ಯಾಟರ್ ಪಾರ್ಥಿವ್ ಪಟೇಲ್ ಕೂಡ ಇತ್ತೀಚೆಗೆ ಆಲ್-ರೌಂಡರ್ಗಳ ಕೊರತೆಗೆ ಐಪಿಎಲ್ನ 'ಇಂಪ್ಯಾಕ್ಟ್ ಪ್ಲೇಯರ್' ನಿಯಮವೇ ಕಾರಣ ಎಂದು ದೂರಿದ್ದಾರೆ.