'ಇದು ಐಪಿಎಲ್ ಅಲ್ಲ, ಮನೆಗೆ ಹೋಗು'ಎಂದು ಶ್ರೀಲಂಕಾ ಎ ಆಟಗಾರರು ಸ್ಲೆಡ್ಜಿಂಗ್ ವಿವಾದ; ವೈಭವ್ ಸೂರ್ಯವಂಶಿ, ತಿಲಕ್ ವರ್ಮಾಗೆ BCCI ದಂಡ!

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 'ಎ' ಪಂದ್ಯಗಳಿಗೆ ನಿರ್ಬಂಧಗಳನ್ನು ವಿಧಿಸುವುದಿಲ್ಲ ಮತ್ತು ಅದನ್ನು ವಹಿಸಿಕೊಳ್ಳುವುದು ಆಯಾ ಕ್ರಿಕೆಟ್ ಮಂಡಳಿಗಳ ಮೇಲೆ ಅವಲಂಬಿತವಾಗಿರುತ್ತದೆ.
Tilak Varma - Vaibhav Sooryavanshi
ತಿಲಕ್ ವರ್ಮಾ, ವೈಭವ್ ಸೂರ್ಯವಂಶಿ
Updated on

ಜೂನ್ 15 ರಂದು ಡಂಬುಲ್ಲಾದಲ್ಲಿ ನಡೆದ ಭಾರತ ಎ vs ಶ್ರೀಲಂಕಾ ಎ ಪಂದ್ಯದ ವೇಳೆ ವೈಭವ್ ಸೂರ್ಯವಂಶಿ ವಿಶೆನ್ ಹಲಂಬಗೆ ಅವರೊಂದಿಗೆ ದೈಹಿಕ ವಾಗ್ವಾದ ನಡೆಸಿದ ನಂತರ, ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಗಾಶ್ ಶಿಫಾರಸು ಮೇರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವೈಭವ್ ಸೂರ್ಯವಂಶಿ ಮತ್ತು ನಾಯಕ ತಿಲಕ್ ವರ್ಮಾ ಅವರಿಗೆ ಪಂದ್ಯ ಶುಲ್ಕದ ಶೇ 50 ಮತ್ತು ಶೇ 30ರಷ್ಟು ದಂಡ ವಿಧಿಸಲಿದೆ ಎಂದು ವರದಿಯಾಗಿದೆ.

ಸೂಪರ್ ಓವರ್‌ನಲ್ಲಿ ಆತಿಥೇಯರು ಜಯಶಾಲಿಗಳಾದರು. ಪಂದ್ಯದ ನಂತರದ ಸಾಂಪ್ರದಾಯಿಕ ಹ್ಯಾಂಡ್‌ಶೇಕ್‌ಗಳ ಸಮಯದಲ್ಲಿ, ಹಲಂಬಗೆ ಅವರು ಸೂರ್ಯವಂಶಿಗೆ, 'ಮನೆಗೆ ಹೋಗು. ಇದು ಐಪಿಎಲ್ ಅಲ್ಲ' ಎಂದು ಹೇಳಿದ್ದರು ಎನ್ನಲಾಗಿದೆ. ಜೂನ್ 9 ರಂದು ನಡೆದ ಪಂದ್ಯದ ಸಮಯದಲ್ಲಿ ಮತ್ತು ಹಿಂದಿನ ಪಂದ್ಯದಲ್ಲಿ ಎದುರಾಳಿ ತಂಡದ ಆಟಗಾರರು 15 ವರ್ಷದ ಬ್ಯಾಟಿಂಗ್ ಸೆನ್ಸೇಷನ್‌ಗೆ ಸ್ಲೆಡ್ಜಿಂಗ್‌ ಮಾಡಿದ್ದರು.

ವೈಭವ್ ಸೂರ್ಯವಂಶಿ ವಾಗ್ವಾದಕ್ಕೆ ಇಳಿದರು ಮತ್ತು ಹಲಂಬಗೆ ಅವರನ್ನು ತಳ್ಳಿದರು. ಆದಾಗ್ಯೂ, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ನವೇ ಇತರ ಆಟಗಾರರು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಘಟನೆ ಬಳಿಕ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಹಲಂಬಗೆ ಅವರ ಪಂದ್ಯ ಶುಲ್ಕ ಶೇ 50 ರಷ್ಟು ದಂಡ ವಿಧಿಸಲಾಗಿದೆ.

'ಭಾರತ ಎ ತಂಡವು ಪ್ರಮುಖ ಟೂರ್ನಮೆಂಟ್ ಆಡುತ್ತಿದೆ; ಭಾರತೀಯ ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯಬಹುದಾದ ಎಲ್ಲ ಮುಂಬರುವ ಆಟಗಾರರು ತ್ರಿಕೋನ ಸರಣಿಯ ಬಹಳ ದೊಡ್ಡ ಟೂರ್ನಮೆಂಟ್‌ನ ಮಧ್ಯದಲ್ಲಿದ್ದಾರೆ. ಆದ್ದರಿಂದ ಅವರು ಯಾವುದೇ ಸಮಸ್ಯೆಗಳಿಂದ ವಿಚಲಿತರಾಗುವ ಬದಲು ತಮ್ಮ ಆಟದ ಮೇಲೆ ಗಮನಹರಿಸಬೇಕು' ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದ್ದಾರೆ.

Tilak Varma - Vaibhav Sooryavanshi
ಭಾರತ ಎ vs ಶ್ರೀಲಂಕಾ ಎ ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡ ವೈಭವ್ ಸೂರ್ಯವಂಶಿ; ಮಾಜಿ ಆಟಗಾರ ಆರ್ ಅಶ್ವಿನ್ ಹೇಳಿದ್ದಿಷ್ಟು...

ಅಂಪೈರ್‌ಗಳೊಂದಿಗೆ ತಿಲಕ್ ವರ್ಮಾ ವಾದ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 'ಎ' ಪಂದ್ಯಗಳಿಗೆ ನಿರ್ಬಂಧಗಳನ್ನು ವಿಧಿಸುವುದಿಲ್ಲ ಮತ್ತು ಅದನ್ನು ವಹಿಸಿಕೊಳ್ಳುವುದು ಆಯಾ ಮಂಡಳಿಗಳ ಮೇಲೆ ಅವಲಂಬಿತವಾಗಿರುತ್ತದೆ. ಭಾರತ ಎ ತಂಡದ ನಾಯಕ ತಿಲಕ್ ವರ್ಮಾ ಮೈದಾನದಲ್ಲಿರುವ ಅಂಪೈರ್‌ಗಳೊಂದಿಗೆ ಹಲವು ಬಾರಿ ವಾದಿಸಿದರು. ಮೊದಲು ಸೂಪರ್ ಓವರ್ ಬಗ್ಗೆ, ನಂತರ ನೋ-ಬಾಲ್ ಕರೆ ಮತ್ತು ಅಂತಿಮವಾಗಿ ಕೆಟ್ಟ ಬೆಳಕಿನ ಬಗ್ಗೆ. ಹೀಗಾಗಿ, ಅವರಿಗೆ ಪಂದ್ಯ ಶುಲ್ಕದ ಶೇ 30 ರಷ್ಟು ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಶ್ರೀಲಂಕಾ ಎ ತಂಡದ ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಅವರಿಗೆ ಶ್ರೀಲಂಕಾ ಕ್ರಿಕೆಟ್ (SLC) ಶೇ 20 ರಷ್ಟು ದಂಡ ವಿಧಿಸಲಿದೆ. ಆದಾಗ್ಯೂ, ಅದು ಏಕೆ ಎಂದು ತಿಳಿದಿಲ್ಲ. ಸೂರ್ಯವಂಶಿ ಮತ್ತು ಹಲಂಬಗೆ ನಡುವಿನ ಜಗಳವನ್ನು ಡಿಕ್ವೆಲ್ಲಾ ವಾಸ್ತವವಾಗಿ ನಿಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com