ಐಪಿಎಲ್ 2027 ಕ್ಕಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೇಡ್ ವಿಂಡೋ ಈಗಾಗಲೇ ತೆರೆದಿದೆ. ಟೀಂ ಇಂಡಿಯಾ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ತಂಡಕ್ಕೆ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಎಲ್ಎಸ್ಜಿಗೆ ಟ್ರೇಡಿಂಗ್ ಆಗಿದ್ದಾರೆ.
ಡಿಸಿ ಸಹ-ಮಾಲೀಕ ಪಾರ್ಥ್ ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಕುಲದೀಪ್ ಅವರಿಗೆ ಭಾವನಾತ್ಮಕ ವಿದಾಯ ಮತ್ತು ಪಂತ್ ಅವರಿಗೆ ಸ್ವಾಗತ ಕೋರಿದ್ದಾರೆ. ಆ ಸಂದೇಶಕ್ಕೆ ಪ್ರತಿಕ್ರಿಯೆಯಾಗಿ, ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಮತ್ತು ಐಪಿಎಲ್ ಮಾಜಿ ನಾಯಕ ಡೇವಿಡ್ ವಾರ್ನರ್ ನೀಡಿರುವ ಪ್ರತಿಕ್ರಿಯೆ ಇದೀಗ ಇಂಟರ್ನೆಟ್ನಲ್ಲಿ ಚರ್ಚೆಗೆ ಕಾರಣವಾಗಿದೆ.
ಮೊದಲಿಗೆ, ಡೇವಿಡ್ ವಾರ್ನರ್ X ನಲ್ಲಿ ಪಾರ್ಥ್ ಜಿಂದಾಲ್ ಅವರ ಪೋಸ್ಟ್ಗೆ ನಗುವ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದರು. ಅಭಿಮಾನಿಗಳು ಇದು ಯಾವ ಅರ್ಥ ನೀಡುತ್ತದೆ ಎಂದು ತಲೆಕೆರೆದುಕೊಳ್ಳುವಂತೆ ಮಾಡಿತ್ತು.
ಅದಾದ ಸ್ವಲ್ಪ ಸಮಯದ ನಂತರ, ವಾರ್ನರ್ ಜಿಂದಾಲ್ ಅವರ ಪೋಸ್ಟ್ಗೆ ಮತ್ತೊಂದು ಪ್ರತ್ಯುತ್ತರವನ್ನು ಪೋಸ್ಟ್ ಮಾಡಿದರು. ಈ ಬಾರಿ ಹರಾಜಿನ ಡೈನಾಮಿಕ್ಸ್ ಮತ್ತು LSG ಯಲ್ಲಿ ಪಂತ್ ಅವರ ಕಳಪೆ ಅದೃಷ್ಟವು DC ಅವರನ್ನು ಮರಳಿ ಪಡೆಯಲು ಕಾರಣವಾಯಿತು ಎಂಬುದನ್ನು ವಿವರಿಸಿದ್ದಾರೆ.
'ಇದು ಯಾವಾಗಲೂ ಆಗುತ್ತಲೇ ಇರುತ್ತದೆ. ಹರಾಜು ಕೈ ಮೀರಬಹುದು. ಒಬ್ಬ ಆಟಗಾರನ ಫಾರ್ಮ್ ಕುಸಿದರೆ, ಒಂದು ತಂಡವು ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಬಹುದು. ಇನ್ನೊಂದು ತಂಡವು ಮೂಲತಃ ಆ ಆಟಗಾರನನ್ನು ಬಯಸಿದ್ದರೂ, ಬಿಡ್ಡಿಂಗ್ನಲ್ಲಿ ಸೋತಿರಬಹುದು. ಆದರೆ, ಅವರು ಮತ್ತೊಂದು ಅವಕಾಶಕ್ಕಾಗಿ ಕಾಯಬಹುದು' ಎಂದು ವಾರ್ನರ್ ಹೇಳಿದರು.
'ಪ್ರಿಯ ಕುಲದೀಪ್, ಕಳೆದ 5 ವರ್ಷಗಳಲ್ಲಿ ನೀವು ನೀಡಿದ ಸೇವೆಗೆ ಧನ್ಯವಾದಗಳು. ನೀವು ನಮ್ಮ ತಂಡದ ಪ್ರಮುಖ ಭಾಗವಾಗಿದ್ದೀರಿ ಮತ್ತು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಮುಂದಿನ ದಿನಗಳು ಚೆನ್ನಾಗಿ ಸಾಗಲಿ - ನೀವು ಚಾಂಪಿಯನ್ ಆಟಗಾರ ಮತ್ತು ನೀವು ನಿಮ್ಮ ತವರು ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೀರಿ ಎಂದು ನನಗೆ ಖಚಿತವಾಗಿದೆ. ರಿಷಭ್ ಅವರೇ, ಕಿರಣ್ ಮತ್ತು ನಾನು ಇಬ್ಬರೂ ನಿಮ್ಮನ್ನು ಡಿಸಿಗೆ ಮರಳಿ ಪಡೆದಿದ್ದಕ್ಕೆ ಸಂತೋಷಪಡುತ್ತೇವೆ. ದೆಹಲಿಯಲ್ಲಿ ನೀವು ನಿಮ್ಮ ಅತ್ಯುತ್ತಮ ಫಾರ್ಮ್ ಅನ್ನು ಕಂಡುಕೊಳ್ಳಬಹುದೆಂದು ಭಾವಿಸುತ್ತೇನೆ' ಎಂದು ಪಾರ್ಥ್ ಜಿಂದಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಪಂತ್ ಅವರನ್ನು ಎಲ್ಎಸ್ಜಿ ₹27 ಕೋಟಿಯ ದಾಖಲೆಯ ಬೆಲೆಗೆ ಖರೀದಿಸಿತು. ಡಿಸಿ ಮೂಲತಃ ಎಲ್ಎಸ್ಜಿಯ ₹20.75 ಕೋಟಿ ಬಿಡ್ಗೆ ರೈಟ್-ಟು-ಮ್ಯಾಚ್ ಹಕ್ಕನ್ನು ಚಲಾಯಿಸಿದರೂ, ಡಿಸಿ ಅದನ್ನು ₹27 ಕೋಟಿಗೆ ಏರಿಸಿತು.
ಕಳೆದ ಆವೃತ್ತಿಗೆ ಹೋಲಿಸಿದರೆ ಇದೀಗ ಪಂತ್ ₹12 ಕೋಟಿ ಕಡಿಮೆ ವೇತನ ಪಡೆದುಕೊಂಡಿದ್ದಾರೆ. ₹15 ಕೋಟಿಗೆ ಡಿಸಿ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ.
Advertisement