IPL 2026: GT ವಿರುದ್ಧ RCBಗೆ ಹೀನಾಯ ಸೋಲು; 'ಸಂಪೂರ್ಣವಾಗಿ ನ್ಯಾಯಯುತ ಕ್ಯಾಚ್ ಆಗಿತ್ತು' ಎಂದ ಆರ್ ಅಶ್ವಿನ್!

ಜೇಸನ್ ಹೋಲ್ಡರ್ ಚೆಂಡನ್ನು ಸರಿಯಾಗಿ ಸಂಗ್ರಹಿಸಿಲ್ಲ ಎಂದು ಆರ್‌ಸಿಬಿ ಶಿಬಿರವು ಮನವರಿಕೆ ಮಾಡಿಕೊಡಲು ಮುಂದಾಯಿತು. ಆದರೆ, ಅಂಪೈರ್ ನಿರ್ಧಾರವನ್ನು ಬದಲಿಸಲಿಲ್ಲ.
Virat Kohli with fourth umpire over the ball touching the ground.
ನಾಲ್ಕನೇ ಅಂಪೈರ್ ಜೊತೆ ವಿರಾಟ್ ಕೊಹ್ಲಿ ಚರ್ಚೆ
Updated on

ಗುಜರಾತ್ ಟೈಟಾನ್ಸ್ (GT) ಮತ್ತು ರಾಯಲ್ ಚಾಲೆಂಜರ್ಸ್ (RCB) ಬೆಂಗಳೂರು ನಡುವಿನ ಐಪಿಎಲ್ 2026ರ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಕ್ಯಾಚ್ ಹಿಡಿದು ರಜತ್ ಪಾಟೀದಾರ್ ಅವರನ್ನು ಔಟ್ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಅರ್ಷದ್ ಖಾನ್ ಬೌಲಿಂಗ್‌ನಲ್ಲಿ ಪಾಟೀದಾರ್ ಪುಲ್ ಶಾಟ್ ಅನ್ನು ಟಾಪ್-ಎಡ್ಜ್ ಮಾಡಿದಾಗ ಚೆಂಡು ಡೀಪ್ ಸ್ಕ್ವೇರ್ ಲೆಗ್ ಕಡೆಗೆ ಹೋಯಿತು. ನಂತರ ಹೋಲ್ಡರ್ ಡೈವ್ ಮಾಡಿ ಕ್ಯಾಚ್ ಅನ್ನು ಪೂರ್ಣಗೊಳಿಸಿದರು. ಕ್ಯಾಚ್‌ ಬಗ್ಗೆ ತೃಪ್ತರಾಗದ ವಿರಾಟ್ ಕೊಹ್ಲಿ, ಚೆಂಡು ನೆಲಕ್ಕೆ ಸ್ಪರ್ಶವಾದ ಬಗ್ಗೆ ನಾಲ್ಕನೇ ಅಂಪೈರ್ ಜೊತೆ ಚರ್ಚೆ ನಡೆಸುತ್ತಿರುವುದು ಕಂಡುಬಂತು.

ಹೋಲ್ಡರ್ ಚೆಂಡನ್ನು ಸರಿಯಾಗಿ ಸಂಗ್ರಹಿಸಿಲ್ಲ ಎಂದು ಆರ್‌ಸಿಬಿ ಶಿಬಿರವು ಮನವರಿಕೆ ಮಾಡಿಕೊಡಲು ಮುಂದಾಯಿತು. ಆದರೆ, ಅಂಪೈರ್ ನಿರ್ಧಾರವನ್ನು ಬದಲಿಸಲಿಲ್ಲ. ಭಾರತದ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಈ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದು, ಔಟ್ ಬಗ್ಗೆ ಸ್ಪಷ್ಟ ತೀರ್ಪು ನೀಡಿದ್ದಾರೆ.

'ಜೇಸನ್ ಹೋಲ್ಡರ್ ಅವರ ಕೈಗಳು ನನ್ನ ಕೈಗಳಿಗಿಂತ ಎರಡು ಪಟ್ಟು ದೊಡ್ಡದಾಗಿದೆ. ಅವರ ಕೈಯಲ್ಲಿ, ಚೆಂಡು ಬಹುತೇಕ ಕಣ್ಮರೆಯಾಗುತ್ತದೆ. ಆದ್ದರಿಂದ, ನೀವು ಅವರ ಬೆರಳುಗಳ ಅಂತರದ ಮೂಲಕ ಚೆಂಡನ್ನು ನೋಡಬಹುದಾದರೂ, ಚೆಂಡು ನೆಲಕ್ಕೆ ತಾಗಿದೆ ಎಂದು ಅರ್ಥವಲ್ಲ. ಬಹುಶಃ ಅವರ ಕೈ ಅದನ್ನು ಸುತ್ತಿಕೊಂಡಿರಬಹುದು. ಚೆಂಡು, ಬಹುಶಃ, ನೆಲಕ್ಕೆ ತಾಗಿಲ್ಲ' ಎಂದು ಆರ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದರು.

ಈ ಔಟ್ ಪಂದ್ಯದ ಪ್ರಮುಖ ಕ್ಷಣವಾಗಿ ಪರಿಣಮಿಸಿತು ಮತ್ತು ಆರ್‌ಸಿಬಿ 4 ವಿಕೆಟ್‌ಗಳಿಂದ ಪಂದ್ಯವನ್ನು ಸೋತಿತು. ಆದಾಗ್ಯೂ, ತಟಸ್ಥವಾಗಿ ನೋಡಿದಾಗ, ಇದು ಸಂಪೂರ್ಣವಾಗಿ ನ್ಯಾಯಯುತ ಕ್ಯಾಚ್‌ನಂತೆ ಕಾಣುತ್ತದೆ ಎಂದು ಅಶ್ವಿನ್ ಹೇಳಿದರು.

Virat Kohli with fourth umpire over the ball touching the ground.
IPL 2026: RCB ಬ್ಯಾಟಿಂಗ್ ವೈಫಲ್ಯ, 4 ವಿಕೆಟ್ ಗಳಿಂದ ಗೆದ್ದ ಗುಜರಾತ್ ಟೈಟನ್ಸ್!

'ನೀವು ಆರ್‌ಸಿಬಿ ತಂಡದಲ್ಲಿದ್ದರೆ, ಅವರು ದುರದೃಷ್ಟವಂತ ಎಂದು ನೀವು ಭಾವಿಸಬಹುದು. ಜಿಟಿ ತಂಡದ ಕಡೆಯಿಂದ ನೋಡಿದರೆ, ಅದು ಕ್ಲೀನ್ ಔಟ್ ಆಗಿರುತ್ತದೆ. ಆದರೆ, ನೀವು ಅದನ್ನು ತಟಸ್ಥವಾಗಿ ನೋಡುತ್ತಿದ್ದರೆ, ಅದು ಸಂಪೂರ್ಣವಾಗಿ ನ್ಯಾಯಯುತ ಕ್ಯಾಚ್ ಆಗಿರುತ್ತದೆ' ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಉತ್ತಮ ಆರಂಭ ಪಡೆದ ಆರ್‌ಸಿಬಿ, 19.2 ಓವರ್‌ಗಳಲ್ಲಿ 155 ರನ್‌ಗಳಿಗೆ ಆಲೌಟ್ ಆಯಿತು. ಅರ್ಷದ್ ಖಾನ್ (3/22), ರಶೀದ್ ಖಾನ್ (2/19) ಮತ್ತು ಜೇಸನ್ ಹೋಲ್ಡರ್ (2/29) ಬೌಲಿಂಗ್ ದಾಳಿಗೆ ಆರ್‌ಸಿಬಿ ಬ್ಯಾಟರ್‌ಗಳ ಬಳಿ ಉತ್ತರ ಇರಲಿಲ್ಲ.

ಇದಕ್ಕೆ ಪ್ರತಿಕ್ರಿಯೆಯಾಗಿ, ಜಿಟಿ ನಾಯಕ ಶುಭಮನ್ ಗಿಲ್ (18 ಎಸೆತಗಳಲ್ಲಿ 43) ಮತ್ತು ಜೋಸ್ ಬಟ್ಲರ್ (19 ಎಸೆತಗಳಲ್ಲಿ 39) ಆರಂಭದಿಂದಲೇ ಆಕ್ರಮಣಕಾರಿಯಾಗಿ ಆಡುವ ಮೂಲಕ ಅಬ್ಬರದ ಆರಂಭವನ್ನು ನೀಡಿದರು. ಮಧ್ಯಮ ಓವರ್‌ಗಳಲ್ಲಿ ತ್ವರಿತ ವಿಕೆಟ್‌ಗಳನ್ನು ಕಳೆದುಕೊಂಡರೂ, ರಾಹುಲ್ ತೆವಾಟಿಯಾ (27) ಮತ್ತು ರಶೀದ್ ಖಾನ್ ಟೈಟಾನ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com