ಕೆ.ಆರ್.ಪುರ: ಕಿಲ್ಲರ್ ಬಿಎಂಟಿಸಿಗೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆ ಕೆ.ಆರ್.ಪುರ ಸಂಚಾರ ಠಾಣೆ ವ್ಯಾಪ್ತಿಯ ಕೊಡಿಗೆಹಳ್ಳಿಯಲ್ಲಿ ನಡೆದಿದೆ.
ನಾಗರಬಾವಿ ನಿವಾಸಿ ಮೋನಿಕಾ (14) ಬಿಎಂಟಿಸಿಗೆ ಬಲಿಯಾದ ದುರ್ದೈವಿ. ಕಾಡುಗುಡಿ ಸಮೀಪದ ಚನ್ನಸಂದ್ರದ ತನ್ನ ಅಜ್ಜಿಯ ಮನೆಗೆ ಮಾವನೊಂದಿಗೆ ತೆರಳುತ್ತಿದ್ದಾಗ ಕೊಡಿಗೆಹಳ್ಳಿ ಬಳಿ 24ನೇ ಡಿಪೋಗೆ ಸೇರಿದ ಮಾರುಕಟ್ಟೆ ಮತ್ತು ಸಾದರಮಂಗಲ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್-313ಇ ಡಿಕ್ಕಿ ಹೊಡೆದಿದೆ.
ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣವಾಗಿದ್ದು, ಬಸ್ ಡಿಕ್ಕಿ ಹೊಡೆದ ಪರಿಣಾಮ ಮೋನಿಕಾ ಬಸ್ ಚಕ್ರದಡಿ ಸಿಲುಕಿ ಸ್ಥಳದಲೇ ಮೃತಪಟ್ಟಿದ್ದಾಳೆ. ಬಸ್ ಚಾಲಕ ಮತ್ತು ನಿರ್ವಾಹಕ ನಾಪತ್ತೆಯಾಗಿದ್ದಾರೆ. ಕೆ.ಆರ್.ಪುರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ದೇಹವನ್ನು ಬೌರಿಂಗ್ ಅಸ್ವತ್ರೆಗೆಯಲ್ಲಿ ಇಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement