ರಾತ್ರಿ ಪಾಳಿ ಕೆಲಸಕ್ಕೆ ಹೋಗುತ್ತಿದ್ದ ಟೆಕ್ಕಿಗಳನ್ನು ಅಡ್ಡಗಟ್ಟಿ ದರೋಡೆ

ರಾತ್ರಿ ಪಾಳಿ ಕೆಲಸಕ್ಕೆ ಹೋಗುತ್ತಿದ್ದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್‍ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರನ್ನು ಬೆದರಿಸಿ ನಗದು ಹಾಗೂ...
ಸಾದಂರ್ಭಿಕ ಚಿತ್ರ
ಸಾದಂರ್ಭಿಕ ಚಿತ್ರ

ಬೆಂಗಳೂರು: ರಾತ್ರಿ ಪಾಳಿ ಕೆಲಸಕ್ಕೆ ಹೋಗುತ್ತಿದ್ದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್‍ರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಅವರನ್ನು ಬೆದರಿಸಿ ನಗದು ಹಾಗೂ ಆಭರಣ ದೋಚಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಲಗ್ಗೆರೆಯ ಪ್ರೀತಿನಗರದ ನಿಹಾಲ್ ಪ್ರಸಾದ್ ಗೌಡ ಅವರು ಸ್ನೇಹಿತ ಸ್ಟ್ಯಾನ್ಲಿ ಹಣ, ಆಭರಣ ಕಳೆದುಕೊಂಡವರು. ಇಬ್ಬರೂ ಬುಧವಾರ ರಾತ್ರಿ ತಮ್ಮ ಬೈಕ್‍ನಲ್ಲಿ ಹೋಗುತ್ತಿದ್ದರು.

ಈ ವೇಳೆ ನೃಪತುಂಗ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಈ ಸಂಬಂಧ ನಿಹಾಲ್ ಅವರು ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com