ಬೆಂಗಳೂರು: ಎಸ್ ಜಿ ಎಸ್ ಅಂತರಾಷ್ಟ್ರೀಯ ಯೋಗ ಪ್ರತಿಷ್ಠಾನ ಹಾಗೂ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಸಹಯೋಗದಲ್ಲಿ ಜೂನ್ 21ರಂದು 'ಯೋಗ ಚಾಂಪಿಯನ್ ಶಿಪ್' ಸ್ಪರ್ಧೆಯನ್ನು ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅತರರಾಷ್ಟ್ರೀಯ ಯೋಗ ಸಂಯೋಜಕರಾದ ಆಚಾರ್ಯ ಎಂ. ನಿರಂಜನಮೂರ್ತಿ, ಅಂತರರಾಷ್ಟ್ರೀಯ ಯೋಗ ದಿನದ ಸವಿ ನೆನಪಿಗಾಗಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮೂರು ಆಸನಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.
ಸ್ಪರ್ಧೆಯು 9 ವಯೋವಿಭಾಗದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಸುತ್ತಿದ್ದು, ಸ್ಪರ್ಧ ಮೂರು ವಿಜೇತರಿಗೆ 5 ಸಾವಿರ ನಗದು ಬಹುಮಾನ ಮತ್ತು ಯೋಗ ಕುಮಾರ, ಯೋಗ ಕುಮಾರಿ, ಸೇರಿದಂತೆ ವಿಭಿನ್ನ ಬಿರುದುಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಜೂನ್ 15ರೊಳಗಾಗಿ ನೊಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ: ಆಚಾರ್ಯ ಎಂ.ನಿರಂಜನಮೂರ್ತಿ ಅಂತರರಾಷ್ಟ್ರೀಯ ಯೋಗ ಸಂಯೋಜಕ, ನಂ.7, 4ನೇ ಮಹಡಿ, ಡಾ.ವಿಷ್ಣುವರ್ಧನ್ ರಸ್ತೆ, ಪದ್ಮನಾಭನಗರ ಬೆಂಗಳೂರು- 560061
ದೂರವಾಣಿ ಸಂಖ್ಯೆ: 9343583787 ಸಂಪರ್ಕಿಸಿ
Advertisement