ಆನೆ ದಂತ ಮಾರುತ್ತಿದ್ದ ವ್ಯಕ್ತಿ ಸೆರೆ

ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಪಿ.ಶೇಖರ್ ಎಂಬಾತನನ್ನು ಬಂಧಿಸಿರುವ ಬಸವನಗುಡಿ ಪೊಲೀಸರು 15 ಕೆ.ಜಿ ತೂಕದ ಎರಡು ದೊಡ್ಡ ಗಾತ್ರದ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಪಿ.ಶೇಖರ್ ಎಂಬಾತನನ್ನು ಬಂಧಿಸಿರುವ ಬಸವನಗುಡಿ ಪೊಲೀಸರು 15 ಕೆ.ಜಿ ತೂಕದ ಎರಡು ದೊಡ್ಡ ಗಾತ್ರದ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಧರ್ಮಪುರಿ ಮೂಲದ ಶೇಖರ್ ಹಾಗೂ ಸಹಚರ ಮಂಜುನಾಥ ಎಂಬುವರು ಹಳೇ ಕನಕಪುರ ರಸ್ತೆ ಕೃಷ್ಣರಾವ್  ಪಾರ್ಕ್ ಪೂರ್ವ ಗೇಟ್ ಬಳಿ ಆನೆ ದಂತ ಮಾರಾಟಕ್ಕೆ ಗ್ರಾಹಕರಿಗಾಗಿ ಹುಡುಕಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಸವನಗುಡಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಂಜುನಾಥ ಎಂಬಾತ ಪರಾರಿಯಾಗಿದ್ದಾನೆ.

ಯಾವ ಅರಣ್ಯದಲ್ಲಿ ಆನೆಗಳನ್ನು ಹತ್ಯೆಗೈದು ದಂತ ಕದಿಯಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com