ನಾಯಿ ಕೊಲೆ ಮಾಡಿದ್ದ ಇಬ್ಬರ ಬಂಧನ, ಬಿಡುಗಡೆ

ಕೈ ಕಚ್ಚಿದ ಕೋಪಕ್ಕೆ ಸಾಕು ನಾಯಿಯನ್ನು ಕೊಂದ ಆರೋಪದಡಿ ಈಶಾನ್ಯ ಭಾರತದ ಇಬ್ಬರು ಯುವಕರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ...
ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
Updated on

ಬೆಂಗಳೂರು: ಕೈ ಕಚ್ಚಿದ ಕೋಪಕ್ಕೆ ಸಾಕು ನಾಯಿಯನ್ನು ಕೊಂದ ಆರೋಪದಡಿ ಈಶಾನ್ಯ ಭಾರತದ ಇಬ್ಬರು ಯುವಕರನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ.

ಕೆ.ಆರ್.ಪುರ ಸಮೀಪದ ಭಟ್ಟರಹಳ್ಳಿಯ ಸುಭಾಷ್ ನಗರದಲ್ಲಿ ವಾಸವಾಗಿದ್ದ ಮಣಿಪುರ ಮೂಲದ ವಿದ್ಯಾರ್ಥಿಗಳು 6 ತಿಂಗಳಿಂದ ನಾಯಿ ಸಾಕಿಕೊಂಡಿದ್ದರು. ಆದರೆ, ಇತ್ತೀಚೆಗೆ ಅದು ತಮ್ಮನ್ನು ಕಚ್ಚಿದೆ ಎಂದು ಕೊಂದು ಶವವನ್ನು ಸಮೀಪದ ಕೆರೆದಂಡೆಯೊಂದರಲ್ಲಿ ಬಿಸಾಡಿದ್ದರು. ಇದನ್ನು ಗಮನಿಸಿದನೆರೆಮನೆಯ ಯುವಕನೊಬ್ಬ ಪ್ರಾಣಿ ದಯಾ ಸಂಘ ಹಾಗೂಕೆ.ಆರ್.ಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು.

ನಾಯಿ ಕೊಂದ ಆರೋಪದ ಮೇಲೆ ಯುವಕರ ವಿರುದ್ಧ ಐಪಿಸಿ ಕಲಂ 428 ಅನ್ವಯ ಪ್ರಕರಣ ದಾಖಲಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಕೆ.ಆರ್.ಪುರ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com