ಮಚ್ಚಿನಿಂದ ಕೊಚ್ಚಿ ರೌಡಿ ಕೊಲೆ

ಮೈಸೂರು ರಸ್ತೆ ಚಾಮರಾಜಪೇಟೆ ಸಮೀಪದ ಬಾಬಾ ಲೇನ್ ನಲ್ಲಿ ರೌಡಿ ಶೀಟರ್ ಸಂಜಯ್ ಕುಮಾರ್ (22) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಮೈಸೂರು ರಸ್ತೆ ಚಾಮರಾಜಪೇಟೆ ಸಮೀಪದ ಬಾಬಾ ಲೇನ್ ನಲ್ಲಿ ರೌಡಿ ಶೀಟರ್ ಸಂಜಯ್ ಕುಮಾರ್ (22) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ಗಿರಿಪುರ ನಿವಾಸಿಯಾಗಿರುವ ಸಂಜಯ್ ಕುಮಾರ್ ಚಾಮರಾಜಪೇಟೆ ಠಾಣೆ ರೌಡಿ ದಿಲೀಪ್ ಅಲಿಯಾಸ್ ಪಟ್ಟಾಭಿ ಹಾಗೂ ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ 8.30ರ ಸುಮಾರಿಗೆ ಸ್ನೇಹಿತರ ಜತೆ ಸಂಜಯ್ ಮನೆ ಕಡೆ ತೆರಳುತ್ತಿದ್ದ. ಈ ವೇಳೆ ಆಟೋದಲ್ಲಿ ಬಂದ 8 ಮಂದಿಯ ತಂಡ ಸಂಜಯ್ ಮೇಲೆ ಮಾರಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ದಾಳಿ ನಡೆಸಿ ಪರಾರಿಯಾಗಿದೆ. ನಂತರ ನಂತರ ಸ್ಥಳಕ್ಕೆ ಧಾವಿಸಿದ ಪೊ ಲೀಸರು, ಸಂಜಯ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ಚಿಕಿತ್ಸೆ ಫಲಿಸದೆ ರಾತ್ರಿ 10.45ರ ಸುಮಾರಿಗೆ ಮೃತಪಟ್ಟಿದ್ದಾನೆ. ಹಂತಕರ ಬಗ್ಗೆ ಮಾಹಿತಿ ಇದ್ದು ಶೀಘ್ರದಲ್ಲೇ ಬಂಧಿಸುತ್ತೇವೆ. ಇಬ್ಬರು ರೌಡಿಗಳು ಪರಸ್ಪರ ದ್ವೇಷ ಸಾಧಿಸುತ್ತಿದ್ದರು. ಒಬ್ಬರನ್ನು ಕೊಲ್ಲಲು ಮತ್ತೊಬ್ಬ ಹೊಂಚು ಹಾಕುತ್ತಿದ್ದರು. ಚಾಮರಾಜ ಪೇಟೆ ಠಾಣೆಯಲ್ಲಿ ಪ್ರಕಱಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com