ಮೊಬೈಲ್ ಕಳ್ಳನನ್ನು ಬೆನ್ನತ್ತಿ ಹಿಡಿದ ಹೊಯ್ಸಳ

ನಡೆದು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ದುಷ್ಕರ್ಮಿಯನ್ನು ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ಬೆನ್ನಟ್ಟಿ ಬಂಧಿಸಿರುವ ಘಟನೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಡೆದು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ದುಷ್ಕರ್ಮಿಯನ್ನು ಗಸ್ತಿನಲ್ಲಿದ್ದ ಹೊಯ್ಸಳ ಪೊಲೀಸರು ಬೆನ್ನಟ್ಟಿ ಬಂಧಿಸಿರುವ ಘಟನೆ ಉಪ್ಪಾರಪೇಟೆ ಕಿಲಾರಿ ರಸ್ತೆಯಲ್ಲಿ ನಡೆದಿದೆ. ವಿವಿ ಪುರ ನಿವಾಸಿ ಮಹಮ್ಮದ್ ಕದೀರ್ (26) ಬಂಧಿತ ಆರೋಪಿ.

ಯಶವಂತಪುರದ ಜನರಲ್ ಸ್ಟೋರ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಭಿಲಾಷ್ ಎಂಬುವವರು ಕೆಲಸ ಮುಗಿಸಿಕೊಂಡು ತಡರಾತ್ರಿ 10.30ರಲ್ಲಿ ಅಭಿನಯ ಚಿತ್ರಮಂದಿರನಡೆದು ಹೋಗುತ್ತಿದ್ದರು. ಅಲ್ಲಿಂದ ಕಿಲಾರಿ ರಸ್ತೆ ಯಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಬಂದ ಕದೀರ್ ಅವರನ್ನು ಬೆದರಿಸಿ ಮೊಬೈಲ್ ಕಿತ್ತು-ಕೊಂಡು ಪರಾರಿಯಾದ. ಈ ವೇಳೆ ಸಹಾಯಕ್ಕಾಗಿ ಅಭಿಲಾಷ್ ಕೂಗಾಡಿದ್ದಾರೆ. ಇದೇ ವೇಳೆ ಗಸ್ತಿನಲ್ಲಿದ್ದ ಪೊಲೀಸರು ಪರಾರಿ ಯಾಗುತ್ತಿದ್ದ ಆರೋಪಿಯನ್ನು ಬೆನ್ನತ್ತಿ ಹಿಡಿದಿದ್ದಾರೆ. ಆರೋಪಿಯಿಂದ ಮೊಬೈಲ್ ಪೋನ್ ಗಳನ್ನು  ವಶಪಡಿಸಿಕೊಳ್ಳಲಾಗಿದೆ ಎಂದು ಉಪ್ಪಾರಪೇಟೆ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com