ಹೆತ್ತ ಮಕ್ಕಳನ್ನು ಕೊಂದು ಚೀಲ ಕಟ್ಟಿ ಚರಂಡಿಗೆ ಎಸೆದ ಕಟುಕ ತಂದೆ

ಮಕ್ಕಳ ಶಾಲೆಯ ಫೀಸು ಕಟ್ಟಲು ಹಣ ಕೇಳಿದ್ದರಿಂದ ಕೋಪಗೊಂಡ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಚರಂಡಿಗೆ .,..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು :ಮಕ್ಕಳ ಶಾಲೆಯ ಫೀಸು ಕಟ್ಟಲು ಹಣ ಕೇಳಿದ್ದರಿಂದ ಕೋಪಗೊಂಡ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಚರಂಡಿಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಭುವನೇಶ್ವರ ನಗರ ನಿವಾಸಿ ಶಿವಕುಮಾರ್  ತನ್ನ ಮಕ್ಕಳಾದ ಪವನ್ (9), ಸಿಂಚನ (3)ರನ್ನು ಹತ್ಯೆ ಮಾಡಿ ಮೋರಿಗೆಸೆದ ನಿರ್ದಯಿ ತಂದೆ.

ಮಕ್ಕಳು ಮನೆಯಲ್ಲಿ ಕಾಣುತ್ತಿಲ್ಲ ಎಂದು ಪತ್ನಿ ಫೋನ್ ಮಾಡಿದಾಗ, ಮಲೆಮಹದೇಶ್ವರಬೆಟ್ಟದಲ್ಲಿ ಅವರು ತಪ್ಪಿಸಿಕೊಂಡರು ಎಂದು ಸುಳ್ಳು ಹೇಳಿದ್ದ. ಗಂಡನ ವರ್ತನೆಯಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ವಿಷಯ ತಿಳಿಸುವುದಾಗಿ ಹೇಳಿದ ನಂತರ ಸತ್ಯವನ್ನು ಹೇಳಿದ್ದ.

ಫೆಬ್ರವರಿ 20ರಂದು ಮಕ್ಕಳಿಬ್ಬರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಆರೋಪಿ, ಶವಗಳನ್ನು ಗೋಣಿಚೀಲದಲ್ಲಿ ಕಟ್ಟಿ ಮೋರಿಗೆ ಎಸೆದಿದ್ದ. ನಂತರ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ. ನಂತರ ಪತ್ನಿ ಪೊಲೀಸರಿಗೆ ವಿಷಯ ತಿಳಿಸಿದ್ದಾಳೆ.  ಶಿವಕುಮಾರ್‌ನನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಮೋರಿಯಲ್ಲಿ ಹುಡುಕಾಟ ನಡೆಸಿದಾಗ ಮಕ್ಕಳಿಬ್ಬರ ಶವ ಪತ್ತೆಯಾಗಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com