ಕದ್ದ ವಜ್ರ ಮಾರಾಟಕ್ಕೆ ಯತ್ನ: ಕೇರಳದ ನಾಲ್ವರ ಬಂಧನ

ಕಳವು ಮಾಡಿದ್ದ ವಜ್ರ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ರು.1.14 ಕೋಟಿ ಮೌಲ್ಯದ 10.2 ಕ್ಯಾರೆಟ್ ವಜ್ರ ವಶಪಡಿಸಿಕೊಂಡಿದ್ದಾರೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಕಳವು ಮಾಡಿದ್ದ ವಜ್ರ ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು
ರು.1.14 ಕೋಟಿ ಮೌಲ್ಯದ 10.2 ಕ್ಯಾರೆಟ್ ವಜ್ರ ವಶಪಡಿಸಿಕೊಂಡಿದ್ದಾರೆ.

ಕೊಚ್ಚಿನ್‍ನ ಕೆ. ಶನೋಜ್ ಕುಮಾರ್(39), ಕಣ್ಣೂ ರಿನ ನಿಕೀಲ್(25), ವಿಜಯ್ (26) ಮತ್ತು ಕ್ಯಾಲಿಕಟ್‍ನ ರವೀಂದ್ರ(54) ಬಂಧಿತರು. ಕೇರಳದಲ್ಲಿ ಕಳವು ಮಾಡಿದ್ದ ವಜ್ರವನ್ನು ಪಡೆದುಕೊಂಡು ಅಧಿಕ ಹಣಕ್ಕೆ ಮಾರಾಟ ಮಾಡಲು ನಗರಕ್ಕೆ ಬಂದಿದ್ದ ಆರೋಪಿಗಳನ್ನು ಬ್ರಿಗೇಡ್ ರಸ್ತೆಯಲ್ಲಿರುವ ಓಸಿಯಾ ಇಂಟರ್ ನ್ಯಾಷನಲ್ ಹೋಟೆಲ್ ಕೊಠಡಿಯೊಂದರಲ್ಲಿ ಬಂಧಿಸಿರುವ ಸಿಸಿಬಿ ಪೊಲೀಸರು ರು.1.14 ಕೋಟಿ ಮೌಲ್ಯದ ವಜ್ರದ ಹರಳು, 6 ಮೊಬೈಲ್, ರು.4200 ನಗದು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು 10 ದಿನಗಳಿಂದ ವಜ್ರ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com