ಪಶ್ಚಿಮ ಬಂಗಾಳದ ಬಿಷ್ಣುಪುರದಲ್ಲಿ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ದೀದಿ, ಬಿಜೆಪಿ ಬಾಬು (ಮೋದಿ) ಜೈ ಶ್ರೀರಾಮ್ ಎಂದು ಹೇಳುವ ನೀವು ಒಂದೇ ಒಂದು ರಾಮಮಂದಿರವನ್ನಾದರೂ ನಿರ್ಮಿಸಿದ್ದಿರಾ.. ರಾಮಚಂದ್ರನನ್ನು ನಿಮ್ಮ ಪಕ್ಷದ ಎಜೆಂಟ್ ಮಾಡಿಕೊಂಡಿದ್ದೀರಾ... ಜೈ ಶ್ರೀರಾಮ್ ಎಂದು ಬಲವಂತವಾಗಿ ಇತರೊಂದಿಗೂ ಹೇಳಿಸುತ್ತೀರಾ.. ಚುನಾವಣಾ ಪ್ರಚಾರಕ್ಕಾಗಿ ಮಾತ್ರ ರಾಮಚಂದ್ರ ನಿಮಗೆ ಸೀಮಿತನಾಗಿದ್ದಾನೆ ಎಂದು ಕಿಡಿಕಾರಿದರು.