ರಸ್ತೆ ಅಪಘಾತದಲ್ಲಿ ಪಿಯು ವಿದ್ಯಾರ್ಥಿ ದುರ್ಮರಣ
ಬೆಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪಿಯುಸಿ ವಿದ್ಯಾರ್ಥಿ ಮೃತ ಪಟ್ಟು ಮತ್ತೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಳಿ ಗೇಟ್ ಬಳಿ ನಡೆದಿದೆ.
ಕೆಂಪಾಪುರದ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿ ಆರ್ .ಟಿ ನಗರದ ನಿವಾಸಿ ಅರವಿಂದ್ ಮುರುಳೀದರನ್ ಮೃತ ದುರ್ದೈವಿ. ಈತ ಇಂದು ಬೆಳಗ್ಗೆ ತನ್ನ ಬೈಕ್ ನಲ್ಲಿ ಕಾಲೇಜಿಗೆ ತನ್ನ ಹೋಂಡಾ ಆಕ್ಟೀವಾ ದಲ್ಲಿ ತೆರಳುತ್ತಿದ್ದ. ಈ ವೇಳೆ ವೇಗವಾಗಿ ಬಂದ ಕಾರೊಂದು ಅರವಿಂದನ ಆಕ್ಟೀವಾ ಮತ್ತು ಇನ್ನೊಂದು ಬೈಕ್ ಗೆ ಡಿಕ್ಕಿ ಹೊಡೆದಿದೆ.
ಕೂಡಲೇ ಅರವಿಂದ್ ಮುರುಳಿಧರ್ ಮತ್ತು ಇನ್ನೊಬ್ಬ ಬೈಕ್ ಸವಾರ ವಿಜಯ್ ಹೀರೆಮಠ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯ್ತು. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮದ್ಯದಲ್ಲೇ ಅರವಿಂದ್ ಮೃತ ಪಟ್ಟಿದ್ದಾನೆ. ಇನ್ನು ತೀವ್ರ ಗಾಯಹಗೊಂಡಿರುವ ವಿಜಯ್ ಹೀರೆಮಠ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಮಾರುತಿ ಆಲ್ಟೋ ಕಾರು ಚಲಾಯಿಸುತ್ತಿದ್ದ ಅನಿತಾ ಸೇನ್ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಖಾಸಗಿ ಕಂಪನಿಯೊಂದರಲ್ಲಿ ಗ್ರಾಫಿಕ್ ಡಿಸೈನರ್ ಆಗಿರುವ ಅನಿತಾ ಸೇನ್ ಲರ್ನಿಂಗ್ ಲೈಸೆನ್ಸ್ ಹೊಂದಿದ್ದಾರೆ. ಅನಿತಾ ಸೇನ್ ವಿರುದ್ಧ ಹೆಬ್ಬಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ