ವಕೀಲೆಯಿಂದ 8 ಲಕ್ಷ ಲೂಟಿ: ಇಬ್ಬರು ಪೊಲೀಸ್ ಪೇದೆ ಸೇರಿ ಮೂವರ ಬಂಧನ

ಆಟೋದಲ್ಲಿ ಹಣ ಕೊಂಡೊಯ್ಯುತ್ತಿದ್ದ ಮಹಿಳಾ ವಕೀಲೆಯೊರ್ವರಿಂದ ಇಬ್ಬರು ಪೇದೆಗಳು 8 ಲಕ್ಷ ರೂ ಹಣ ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಆಟೋದಲ್ಲಿ ಹಣ ಕೊಂಡೊಯ್ಯುತ್ತಿದ್ದ ಮಹಿಳಾ ವಕೀಲೆಯೊರ್ವರಿಂದ ಇಬ್ಬರು ಪೇದೆಗಳು 8 ಲಕ್ಷ ರೂ ಹಣ ಲೂಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ವಕೀಲೆ ಸುನೀತಾ ಶುಕ್ರವಾರ ಮೆಜೆಸ್ಟಿಕ್‌ನ ಚಿಕ್ಕಪೇಟೆಯಿಂದ ಪದ್ಮನಾಭದಲ್ಲಿರುವ ವ್ಯಕ್ತಿಯೋರ್ವರಿಗೆ 8 ಲಕ್ಷ ಹಣ ನೀಡಲು ಆಟೋದಲ್ಲಿ ತೆರಳುತ್ತಿದ್ದರು. ಸೀತಾ ಸರ್ಕಲ್‌ ಬಳಿ ಬಂದ ಐವರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ಪೈಕಿ ಇಬ್ಬರು ಪೇದೆಗಳು ಸುನೀತಾ  ಅವರಿದ್ದ ಆಟೋ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆಟೋದಲ್ಲಿ 8 ಲಕ್ಷ ಹಣ ಪತ್ತೆಯಾಗಿದೆ. ಬಳಿಕ ಸುನೀತಾ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಮಧ್ಯರಾತ್ರಿ ವರೆಗೂ ಕೂರಿಸಿಕೊಂಡಿದ್ದಾರೆ. ಹಣಕ್ಕೆ ಸಂಬಂಧಿಸಿದ ದಾಖಲೆ ತೋರಿಸಿದರು ಏನು ಪ್ರಯೋಜನವಾಗಿಲ್ಲ.

ಈ ವೇಳೆ ಒಬ್ಬ ಪೇದೆ ಹಣ ತೆಗೆದುಕೊಂಡು ಹೋದವರು ಪುನಃ ಬರಲಿಲ್ಲ. ನಂತರ ಮಧ್ಯರಾತ್ರಿ ವಕೀಲೆ ಸುನೀತಾ ಅವರನ್ನು ಮನೆಗೆ ಕಳಿಸಿದ್ದಾರೆ. ಮರುದಿನ ಬೆಳದ್ದೆ ಸುನೀತಾ ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಮೆಘರಿಕ್ ಅವರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ರಾಘವ್ ಕುಮಾರ್ ಮತ್ತು ಮಯೂರ್ ಹಾಗೂ ಪೊಲೀಸ್ ಇನ್ ಫಾರ್ಮರ್ ಕೃಷ್ಣ ಮೂರ್ತಿ ಎಂಬುವರನ್ನು ಬಂಧಿಸಿ, ಅವರಿಂದ ಹಣ ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com