ಬೆಂಗಳೂರಲ್ಲಿ ವಕೀಲೆ ಕೊಲೆ ಪ್ರಕರಣ: ಆರೋಪಿ ಬಂಧನ

ಮಹಾಲಕ್ಷ್ಮಿ ಲೇಔಟ್ ನ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಶನಿವಾರ ನಡೆದಿದ್ದ ವಕೀಲೆ ಜ್ಯೋತಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ...
ಮೃತ ವಕೀಲೆ ಜ್ಯೋತಿ
ಮೃತ ವಕೀಲೆ ಜ್ಯೋತಿ

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್ ನ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ಶನಿವಾರ ನಡೆದಿದ್ದ ವಕೀಲೆ ಜ್ಯೋತಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕನಕಪುರ ಮೂತದ ಮಧು ಬಂಧಿತ ಆರೋಪಿ. ಮಧು ಮತ್ತು ಜ್ಯೊತಿ ಕನಕಪುರದವರಾಗಿದ್ದು, ಹೈಸ್ಕೂಲ್ ವರೆಗೂ ಇಬ್ಬರು ಜೊತೆಯಲ್ಲೇ ವ್ಯಾಸಂಗ ಮಾಡಿದ್ದರು. ಮಧು ಜ್ಯೋತಿ ಬಳಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ.  ಆದರೆ ಆಕೆ ತಿರಸ್ಕರಿಸಿದ್ದಳು.

SSLC ನಂತರ ಜ್ಯೋತಿ ಎಲ್ ಎಲ್ ಬಿ ಅಧ್ಯಯನಕ್ಕಾಗಿ ಬೆಂಗಳೂರಿಗೆ ಬಂದಳು,  ಒಂದು ವರ್ಷದ ಕೆಳಗೆ ಮಧು ಗೆ ಬಿಎಂಟಿಸಿ ಬಸ್ ಕಂಡಕ್ಟರ್ ಆಗಿ ಕೆಲಸ ಸಿಕ್ಕಿತು.ಬೆಂಗಳೂರಿಗೆ ಬಂದ ಮಧು ಆಕೆಯನ್ನು ಪತ್ತೆ ಹಚ್ಚಿ ವಿಳಾಸ ಕೇಳಿದ್ದ, ಆದರೆ ಆಕೆ ಆತನನ್ನು ಅವಾಯ್ಡ್ ಮಾಡಿದ್ದಳು.

ಮಧು ಹೇಗೋ ಆಕೆಯ ವಿಳಾಸ ಪತ್ತೆ ಹಚ್ಚಿ,ಶನಿವಾರ ಸಂಜೆ ತನ್ನ ಸ್ನೇಹಿತ ಹಾಗೂ ಬಸ್ ಡ್ರೈವರ್ ಶಿವರಾಮಯ್ಯ ಜೊತೆ ಭೇಟಿಯಾಗಿದ್ದಾನೆ. ಆಕೆ ಕೆಲಸ ಮಾಡುವ ಸ್ಥಳಕ್ಕೆ ಕಾರಿನಲ್ಲಿ ಬಂದಿದ್ದಾನೆ. ಕಾರಿನಿಂದ ಕೆಳಗಿಳಿದ ಮಧು ಆಕೆಯ ಜೊತೆ ಮಾತನಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಜ್ಯೋತಿಗೆ ಚುಚ್ಚಿದ್ದಾನೆ.

ಇದನ್ನು ನೋಡಿದ ಶಿವರಾಮಯ್ಯ ಅಲ್ಲಿಂದ ಓಡಲು ಯತ್ನಿಸಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಮಧು ಕಾರಿನಲ್ಲಿ ಪರಾರಿಯಾಗಿದ್ದ. ಶಿವರಾಮನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದರು, ಆತ ನೀಡಿದ ಮಾಹಿತಿ ಮೇರೆಗೆ ಮಧುವನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com