ಮಂಗಳೂರು: ದೇಶದಲ್ಲಿ ಅವಶ್ಯಕತೆ ಇರುವ ಬಡಜನರಿಗೆ ಸರ್ಕಾರದ ಮೆಡಿಕಲ್ ಯೋಜನೆಗಳು ತಲುಪಬೇಕು ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಹೊಸ ಸೌಲಭ್ಯಗಳನ್ನು ಉಧ್ಘಾಟಿಸಿ ಮಾತನಾಡಿದ ಅವರು, ಅರ್ಪ ಬಡರೋಗಿಗಳಿಗಾಗಿ ಗೋವಾ ಸರ್ಕಾರ ಹಲವು ಆರೋಗ್ಯ ಸೌಲಭ್ಯಗಳನ್ನು ಒದಗಿಸಿದೆ, ಅಂತಹ ಯೋಜನೆಗಳು ಎಲ್ಲಾ ರಾಜ್ಯಗಳಲ್ಲೂ ಅನುಷ್ಠಾನಗೊಳ್ಳಬೇಕು ಎಂದು ಅವರು ಅಭಿಪ್ರಾಯ ಪಟ್ಟರು.
ಆರ್ಥಿಕವಾಗಿ ತೀರ ಹಿಂದುಳಿದವರಿಗೆ ಆಸ್ಪತ್ರೆಗಳು ಹೆಚ್ಚಿನ ಸಹಾಯ ನೀಡಬೇಕು. ಆರೋಗ್ಯ ಸೇವೆಗಳು ಉತ್ತಮ ಸೇವೆ ಹಾಗೂ ಗುಣಮಟ್ಟವನ್ನು ಸಹ ಕಾಪಾಡಬೇಕು ಎಂದು ಅವರು ಕರೆ ನೀಡಿದರು.
ಕಡಿಮೆ ಬೆಲೆಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಹೇಳಿದ ಅವರು ಕೇಂದ್ರದ ಅನಾಣ್ಯೀಕರಣ ಕ್ರಮಕ್ಕೆ ಬೆಂಬಲ ನೀಡಲು ಆಸ್ಪತ್ರೆಗಳು ನಗದು ರಹಿತ ವ್ಯವಹಾರ ನಡೆಸಬೇಕು ಎಂದು ಪರಿಕ್ಕರ್ ತಿಳಿಸಿದರು.
Advertisement