ಬೆಂಗಳೂರು: ಪೊಲೀಸ್ ಮೇಲೆ ಕಾರು ಹರಿಸಿ ಪರಾರಿಯಾದ ಕಾರು ಕಳ್ಳ

ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ಪೇದೆ ಮೇಲೆಯೇ ಕಾರುಕಳ್ಳ ಕಾರು ಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ಪೇದೆ ಮೇಲೆಯೇ ಕಾರುಕಳ್ಳ ಕಾರು ಹರಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರೇಮ್ ಕುಮಾರ್ ಎಂಬಾತ ಅರ್‌ಟಿ ನಗರ ಬಳಿ ಕಾರು ಕದ್ದು ಎಸ್ಕೇಪ್ ಆಗಿದ್ದ.ಕೂಡಲೇ ಖಚಿತ ಮಾಹಿತಿ ಮೇರೆಗೆ ಅರ್‌‌ಟಿ ನಗರ ಠಾಣೆಯ ನಾಲ್ವರು ಸಿಬ್ಬಂದಿ ಕಳ್ಳನನ್ನ ಹಿಡಿಯಲು ಮುಂದಾಗಿದ್ದರು.

ಉತ್ತರ ಹಳ್ಳಿಯ ಚುಂಚನಘಟ್ಟ ಬಳಿ ಕಾರು ನಿಲ್ಲಿಸಿದ್ದನ್ನು ನೋಡಿ ಪೊಲೀಸರು ಕದ್ದ ಕಾರಿನ ಮುಂದೆ ಬೈಕ್ ನಿಲ್ಲಿಸಿದ್ದಾರೆ. ಶ್ರೀಧರ್ ಮೂರ್ತಿ ಬೈಕ್ ನಿಂದ ಇಳಿಯುತ್ತಿರುವುದನ್ನು ಗಮನಿಸಿದ ಪ್ರೇಮ್ ಬೈಕ್ ಗೆ ಕಾರನ್ನು ಡಿಕ್ಕಿ ಹೊಡೆಸಿ ಅಲ್ಲಿಂದ ಪರಾರಿಯಾಗಿದ್ದಾನೆ.

ಪ್ರೇಮ್ ಡಿಕ್ಕಿ ಹೊಡೆದ ರಭಸಕ್ಕೆ ಶ್ರೀಧರ್ ಮೂರ್ತಿ ಬೈಕ್ ಸಮೇತ ಸುಮಾರು 10 ಅಡಿ ದೂರಕ್ಕೆ ಹೋಗಿ ಬಿದ್ದಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನು ಎಂ ಎಸ್ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಬಲೆ ಬೀಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com