ಚಾಮರಾಜನಗರ: ಶ್ರೀಗಂಧದ ಮರ ಕತ್ತರಿಸಿ ರೆಡ್ ಹ್ಯಾಂಡಾಗಿ ಸಿಕ್ಕಿಕೊಂಡ ಶಾಸಕನ ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಕಮಲಕೇರಿಯಲ್ಲಿ ಶ್ರೀಗಂಧದ ಮರ ಕತ್ತರಿಸಿ ಸಾಗಿಸುತ್ತಿದ್ದ ಆರೋಪದ ಮೇಲೆ ಶಾಸಕ ಪುಟ್ಟರಾಜ ಶೆಟ್ಟಿ ಸಹೋದರ ಪುಟ್ಟರಂಗ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಮಲಕೇರಿ ಗ್ರಾಮದ ಭರತ್ ಎಂಬುವರ ಮನೆಯ ಬಳಿಯಿದ್ದ ಗಂಧದ ಮರವನ್ನು ಕತ್ತರಿಸಿದ್ದ ಪುಟ್ಟರಾಜ್ ಶೆಟ್ಟಿ ಅವುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ಸಾಗಿಸಲು ಯತ್ನಿಸುತ್ತಿದ್ದ. ಈ ವೇಳೆ ಭರತ್ ನೀಡಿದ ದೂರಿನ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಇತ್ತೀಚೆಗೆ ಯಳಂದೂರು ಪೊಲೀಸ್ ಠಾಣೆಯ ಆವರಣದಿಂದಲೂ ಗಂಧದ ಮರವನ್ನು ದುಶ್ಕರ್ಮಿಗಳು ಕತ್ತರಿಸಿ ಸಾಗಾಟ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸಿದ್ದಾರೆ.
Advertisement