ಮೈಸೂರು: ತಮ್ಮ ಕಚೇರಿಯಲ್ಲಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮೈಸೂರು ವಿವಿ ರಿಜಿಸ್ಟಾರ್ ಆರ್.ರಾಜಣ್ಣ ದಲಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮೈಸೂರು ವಿವಿ ಕ್ರಾಪ್ ವರ್ಡ್ ಹಾಲ್ ನಲ್ಲಿ ದಲಿತ ವಿದ್ಯಾರ್ಥಿ ವೇದಿಕೆಯ ಸುಮಾರು 20 ಕಾರ್ಯಕರ್ತರು ಬುಧವಾರ ಬೆಳಗ್ಗೆ ರಾಜಣ್ಣ ವಿರುದ್ಧ ಘೋಷಣೆ ಕೂಗಿದರು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿದ್ದ ಮೀಟಿಂಗ್ ಗೆ ತೆರಳುತ್ತಿದ್ದ ವೇಳೆ ರಾಜಣ್ಣ ಅವರನ್ನ ಅಡ್ಜಗಟ್ಟಿದರು.
ಫೋಟೋದಲ್ಲಿ ಧೂಳು ಇದ್ದ ಕಾರಣ ಅದನ್ನು ಸ್ವಚ್ಛಗೊಳಿಸಲು ತೆಗೆಯಲಾಗಿತ್ತು, ಅದನ್ನು ಕ್ಲೀನ್ ಮಾಡಿ ಮತ್ತೆ ಅದೇ ಜಾಗದಲ್ಲಿ ನೇತು ಹಾಕಲಾಗಿದೆ ಎಂದು ರಾಜಣ್ಣ ಸ್ಪಷ್ಟನೆ ನೀಡಿದ್ದಾರೆ.
ಮೊದಲು ಭಾವಚಿತ್ರವನ್ನು ತೆಗೆದು ಹಾಕಲಾಗಿತ್ತು, ಆದರೆ ಪ್ರತಿಭಟನೆ ನಡೆಸುವ ವಿಷಯ ತಿಳಿದ ಕೂಡಲೇ ಫೋಟೋವನ್ನು ಮತ್ತೆ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
Advertisement