ಕೊಪ್ಪಳ ಮೂಲದ ವರುಣ್ ಕಾಣೆಯಾಗಿದ್ದ ಬಾಲಕ. ಇತ ಲಿಂಗರಾಜಪುರಂನಲ್ಲಿ ತನ್ನ ಶಿಕ್ಷಕಿ ಸುಶೀಲಾ ಜೋಸೆಫ್ ಜತೆ ವಾಸವಾಗಿದ್ದರು. ಸೋಮವಾರ ಮಧ್ಯಾಹ್ನ ಸುಶೀಲಾ ಅವರು ನಿದ್ರೆಗೆ ಜಾರಿದ್ದಾಗ ವರುಣ್ ಮನೆಯಿಂದ ಹೊರಬಂದಿದ್ದ. ನಿದ್ರೆಯಿಂದ ಎದ್ದು ಸುಶೀಲಾ ಅವರು ವರುಣ್ ನನ್ನು ಹುಡುಕಿದ್ದಾರೆ. ಆದರೆ ಆತನ ಎಲ್ಲೂ ಕಾಣದೆ ಇದ್ದಿದ್ದರಿಂದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ದೂರಿನನ್ವಯ ಹೆಣ್ಣೂರು ಪೊಲೀಸರು ಇತರ ಪೊಲೀಸ್ ಠಾಣೆಗಳಿಗೆ ನಾಪತ್ತೆ ಕುರಿತು ಮಾಹಿತಿ ನೀಡಿದ್ದರು.