ಖಾಸಗಿ ಆಸ್ಪತ್ರೆಯಲ್ಲಿ ತನ್ನ ಸಹೋದರಿ ಆಶಾ ಶೆಟ್ಟಿ ಅವರನ್ನು ಭೇಟಿ ಮಾಡಲು ಭಾನುವಾರ ಮಣಿಪಾಲಕ್ಕೆ ತೆರಳಿದ್ದ ಹರ್ಷ ಆಕೆಯ ಕ್ಯಾನ್ಸರ್ ಕೊನೆಯ ಹಂತಕ್ಕೆ ತಲುಪಿದೆ ಎಂದು ವೈದ್ಯರಿಂದ ಮಾಹಿತಿ ಪಡೆದಿದ್ದನು, ಆಶಾ ಅವರು ಚೇತರಿಸಿಕೊಳ್ಳುವ ಸಾಧ್ಯತೆಗಳು ಕಡಿಮೆ ಎಂದು ವೈದ್ಯರು ಹೇಳಿದಾಗ ಆತನಿಗೆ ಅತೀವ ದುಃಖವಾಗಿತ್ತು. ಮರಳಿ ಬೆಂಗಳೂರಿಗೆ ಬಂದ ಹರ್ಷ ಅದೇ ವಿಚಾರವನ್ನು ತನ್ನ ಪತ್ನಿ ರಮ್ಯಾ ಗೆ ಸಹ ತಿಳಿಸಿದ್ದನು. ಬುಧವಾರ ದಿನ ರಾತ್ರಿ ರಮ್ಯಾಗೆ ಹರ್ಷನ ಕೋಣೆಯಿಂದ ಸದ್ದೊಂದು ಕೇಳಿ ಬಂದಿದ್ದು ಆಕೆ ಪರಿಶೀಲಿಸಿದಾಗ ಹರ್ಷ ನೇಣು ಬಿಗಿದುಕೊಂಡಿದ್ದದ್ದು ತಿಳಿದಿದೆ. ತಕ್ಷಣ ಅಂಬ್ಯುಲೆನ್ಸ್ ಗೆ ಕರೆ ಮಾಡಿದ ರಮ್ಯಾ ಅವನನ್ನು ಕೆಸಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾಳೆ. ಆದರೆ ಅಲ್ಲಿಗೆ ತಲುಪುವ ವೇಳೆಗಾಗಲೇ ಹರ್ಷ ಮೃತನಾಗಿದ್ದನೆಂದು ಪೋಲೀಸರು ಹೇಳಿದರು.