ಬೆಂಗಳೂರು: ಟ್ರಾಫಿಕ್ ಸಮಸ್ಯೆಯಿಂದಾಗಿ ಸಿಲಿಕಾನ್ ಸಿಟಿ ಬಹಳಷ್ಟು ಫೇಮಸ್ ಆಗಿದೆ. ಗುರುವಾರ ನಡೆದ ಜೆಡಿಎಸ್ ರ್ಯಾಲಿಯಿಂದ ಬೆಂಗಳೂರು ನಗರ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಅನಾವರಣಾಗೊಂಡಿದೆ.
ಅರಮನೆ ಮೈದಾನಕ್ಕೆ ವಿವಿಧ ಜಿಲ್ಲೆಗಳಿಂದ ಸಮಾವೇಶದಲ್ಲಿ ಭಾಗವಹಿಸಲು ಬಸ್ ಗಳಲ್ಲಿ ಆಗಮಿಸಿದ್ದ ಜನರಿಂದಾಗಿ ಸುಮಾರು 8 ತಾಸುಗಳ ಕಾಲ ನಿಧಾನಗತಿಯ ಸಂಚಾರದಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಬೆಳಗ್ಗೆ 9.30ಕ್ಕೆ ಆರಂಭವಾದ ಟ್ರಾಫಿಸ್ ಸಮಸ್ಯೆ ಸಂಜೆ 5.30 ರವರೆಗೂ ಮುಂದುವರಿದಿತ್ತು.
ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಉಂಟಾದ್ದರಿಂದ ಆ್ಯಂಬುಲೆನ್ಸ್ ಪ್ರಯಾಣಕ್ಕೆ ಕೂಡ ಕೆಲ ಕಾಲ ಅಡ್ಡಿಯುಂಟಾಯಿತು. ಬಳ್ಳಾರಿ ರಸ್ತೆ, ಪ್ಯಾಲೇಸ್ ರೋಡ್, ಜಯಮಲಹ್ ರಸ್ತೆಗಳಲ್ಲಿ ಭಾರೀ ಪ್ರಮಾಣದ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.
ಜೆಡಿಎಸ್ ಪಕ್ಷದ ಕಟೌಟ್ ಗಳು ಉರುಳಿ ಕೆಲ ಕಡೆ ರಸ್ತೆಗೆ ಬಿದ್ದಿದ್ದವು, ವಾಹನ ಸವಾರರು ಸಣ್ಣ ಪುಟ್ಟರಸ್ತೆಗಳಲ್ಲಿ ಸಾಗಲು ಹರಸಾಹಸ ಪಡುತ್ತಿದ್ದರು. ಫ್ರೀಡಂ ಪಾರ್ಕ್ ಬಳಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಕೂಡ ಮತ್ತಷ್ಟು ಟ್ರಾಫಿಕ್ ಸಮಸ್ಯೆಗೆ ಕಾರಣವಾಯಿತು.
Advertisement