ಕಳೆದ ಎಂಡು ತಿಂಗಳಿಂದ ಕುಮಾರಸ್ವಾಮಿ ಲೇಔಟ್ ಸಮೀಪ ಕಾನೂನು ಬಾಹಿರವಾಗಿ ನೆಲೆಸಿದ್ದ ಪಾಕಿಸ್ತಾನದ ಸಮೀರಾ ಅಲಿಯಾಸ್ ನಜ್ಮಾ, ಆಕೆಯ ಸಂಬಂಧಿಕರಾದ ಮಹಮದ್ ಖಾಸೀಫ್, ಕಿರಣ್ ಅಲಿಯಾಸ್ ಝೈನಬ್ ಹಾಗೂ ಈ ಮೂವರಿಗೆ ಸಹಕರಿಸಿದ ಕಾರಣಕ್ಕೆ ಕೇರಳ ಮೂಲದ ಮಹಮದ್ ಸಿಹಾಬ್ ನನ್ನು ಬಂಧಿಸಲಾಗಿತ್ತು. ಈ ವಿಚಾರಣೆ ವೇಳೆ ಪಾಕ್ ಪ್ರೇಮ ಕಹಾನಿ ಬೆಳಕಿಗೆ ಬಂದಿತ್ತು. ತನಿಖೆಯಲ್ಲಿ ಕೇಂದ್ರ ಗುಪ್ತಚರ, ರಾ, ರಾಷ್ಟ್ರೀಯ ತನಿಖಾ ದಳ ಮಾತ್ರವಲ್ಲದೆ ರಾಜ್ಯದ ಐಎಸ್ ಡಿ ಹಾಗೂ ಸಿಸಿಬಿ ತಂಡಗಳು ಕಾರ್ಯ ನಿರತರಾಗಿವೆ.