ನಿನ್ನೆ ಭಾರಿ ಮಳೆಯಿಂದಾಗಿ ಜೆಸಿ ನಗರದ ಡಿಸ್ಪೆಂನ್ಸರಿ ರಸ್ತೆಯಲ್ಲಿ ಮರ ಧರೆಗುರುಳಿದ ಪರಿಣಾಮ ಒಂದೇ ಕುಟುಂಬದ ಮೂವರು ಬಲಿಯಾಗಿದ್ದರು. ಈ ಪೈಕಿ ದಂಪತಿಗಳು ಹಾಗೂ ಮಹಿಳೆಯ ತಮ್ಮ ಅವಘಡದಲ್ಲಿ ಬಲಿಯಾಗಿದ್ದ. ಇದೀಗ ಈ ಕುಟುಂಬದ ಮಾಹಿತಿಗಳು ಲಭ್ಯವಾಗಿದ್ದು, ಘಟನೆಯಲ್ಲಿ ಮೃತಪಟ್ಟ ಮಹಿಳೆ ಭಾರತಿ ಇತ್ತೀಚೆಗಷ್ಟೇ ಮಾರಕ ಕ್ಯಾನ್ಸರ್ ರೋಗದಿಂದ ಮುಕ್ತರಾಗಿ ಸಹಜ ಜೀವನದತ್ತ ಮುಖ ಮಾಡಿದ್ದರಂತೆ. ಆದರೆ ಕ್ಯಾನ್ಸರ್ ಜೊತೆಗಿನ ಸೆಣಸಾಟದಲ್ಲಿ ಜಯಿಸಿದ ಮಹಿಳೆ ಭಾರತಿ ವಿಧಿಯಾಟದ ಜೊತೆಗಿನ ಸೆಣಸಾಟದಲ್ಲಿ ಸೋತು ಮರಬಿದ್ದಿದ್ದರಿಂದ ತಮ್ಮ ಕಾರಿನಲ್ಲೇ ತಮ್ಮ ಗಂಡ ರಮೇಶ್ ಹಾಗೂ ತಮ್ಮ ಜಗದೀಶ್ ರೊಂದಿಗೆ ಕೊನೆಯುಸಿರೆಳೆದಿದ್ದಾರೆ.