ಬೆಂಗಳೂರು: ಸಾಂಬಾರ್ ಚೆನ್ನಾಗಿಲ್ಲ ಎಂದ ಪತಿಯೊಂದಿಗೆ ಜಗಳ, ಪತ್ನಿ ಆತ್ಮಹತ್ಯೆಗೆ ಶರಣು

ಸಾಂಬಾರ್ ಚೆನ್ನಾಗಿಲ್ಲ ಎಂದು ಪತಿ ನಿಂದಿಸಿದ್ದಕ್ಕೆ ಮನನೊಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಚೋಳೂರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಸಾಂಬಾರ್ ಚೆನ್ನಾಗಿಲ್ಲ ಎಂದು ಪತಿ ನಿಂದಿಸಿದ್ದಕ್ಕೆ ಮನನೊಂದ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಧಾನಿ ಬೆಂಗಳೂರಿನ ಚೋಳೂರು ಪಾಳ್ಯದಲ್ಲಿ ಶುಕ್ರವಾರ ನಡೆದಿದೆ. 
ನಾಗರತ್ನ ಶ್ರೀನಿವಾಸ್ ಅಲಿಯಾಸ್ ನಾಗರತ್ನಮ್ಮ (50) ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಕೆಲ ವರ್ಷಗಳ ಹಿಂದೆ ಶ್ರೀನಿವಾಸ್ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವವಾಯು ಎದುರಾಗಿತ್ತು. ಇಬ್ಬರ ನಡುವೆ ವೈಮನಸ್ಸು ಕೂಡ ಉಂಟಾಗಿತ್ತು. ಹಲವು ಬಾರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳಗಳಾಗಿವೆ. 
ಖಾಸಗಿ ಕಂಪನಿಯೊಂದರಲ್ಲಿ ತಾಂತ್ರಿಕ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಅವರು, ಪಾರ್ಶ್ವವಾಯು ಎದುರಾದ ಬಳಿಕ ಕೆಲಸವನ್ನು ಬಿಟ್ಟಿದ್ದರು. 
ಶುಕ್ರವಾರ ರಾತ್ರಿ ಊಟಕ್ಕೆ ಕುಳಿತಿದ್ದಾಗ ನಾಗರತ್ನಾ ಸಿದ್ಧಪಡಿಸಿದ್ದ ಸಾಂಬಾರ್ ನಲ್ಲಿ ಪತಿ ಶ್ರೀನಿವಾಸ್ ದೋಷ ಕಂಡು ಹಿಡಿದ್ದು, ಸಾಂಬಾರ್ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ. 
ನಾನೊಬ್ಬ ನಿರುದ್ಯೋಗಿ ಮನೆಯಲ್ಲೇ ಬಿಟ್ಟಿ ಊಟ ಮಾಡುತ್ತಾ ಕಾಲ ಕಳೆಯುತ್ತಿದ್ದೇನೆಂದು ನಿರ್ಲಕ್ಷಿಸುತ್ತಿದ್ದೀಯಾ ಎಂದು ನಿಂದಿಸಿದ್ದರು. ಇದರಿಂದ ಮನನೊಂದು ನಾಗಲಕ್ಷ್ಮೀ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com