ಹುಟ್ಟುಹಬ್ಬದ ದಿನವೇ ನೀರು ಎಂದು ಪೊಟ್ಯಾಶಿಯಮ್ ಸೈನೈಡ್ ಕುಡಿದು ಮಕ್ಕಳಿಬ್ಬರ ದಾರುಣ ಸಾವು

ಹುಟ್ಟು ಹಬ್ಬದ ದಿನವೇ ಹುಡುಗರಿಬ್ಬರು ನೀರು ಎಂದು ಭಾವಿಸಿ ಪೊಟ್ಯಾಶಿಯಮ್ ಸೈನೈಡ್ ಕುಡಿದು ದಾರುಣ ಸಾವನ್ನಪ್ಪಿದ್ದಾರೆ...
ಮನೀಶ್ ಶಂಕರ್ ಸಿಂಗ್-ಸಾಯಿಲ್ ಸಿಂಗ್
ಮನೀಶ್ ಶಂಕರ್ ಸಿಂಗ್-ಸಾಯಿಲ್ ಸಿಂಗ್
Updated on
ಬೆಂಗಳೂರು: ಹುಟ್ಟು ಹಬ್ಬದ ದಿನವೇ ಹುಡುಗರಿಬ್ಬರು ನೀರು ಎಂದು ಭಾವಿಸಿ ಪೊಟ್ಯಾಶಿಯಮ್ ಸೈನೈಡ್  ಕುಡಿದು ದಾರುಣ ಸಾವನ್ನಪ್ಪಿದ್ದಾರೆ. 
ನಗರದ ಅವೆನ್ಯೂ ರೋಡ್ ನ ಕಿಲಾರೆ ರಸ್ತೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಮೃತ ಬಾಲಕರನ್ನು ಸಾಯಿಲ್ ಸಿಂಗ್ ಮತ್ತು ಮನೀಶ್ ಶಂಕರ್ ಸಿಂಗ್ ಎಂದು ಗುರುತಿಸಲಾಗಿದೆ. 
ಚಿನ್ನವನ್ನು ಕರಗಿಸಲು ಬಳಸಲಾಗುವ ಪೊಟ್ಯಾಶಿಯಮ್ ಸೈನೈಡ್ ಅನ್ನು ಸಾಫ್ಟ್ ಡ್ರಿಂಕ್ಸ್ ಬಾಟಲಿಯಲ್ಲಿ ಇಡಲಾಗಿತ್ತು. ಆಟವಾಡುತ್ತಿದ್ದ ಮಕ್ಕಳು ತಿಳಿಯದೇ ನೀರು ಎಂದು ಬಾವಿಸಿ ಕುಡಿದಿದ್ದಾರೆ. ನಂತರ ವಾಂತಿ ಮಾಡಿಕೊಂಡ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಇಬ್ಬರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. 
ಮಕ್ಕಳಿಬ್ಬರ ಸಾವಿನಿಂದಾಗಿ ಜನ್ಮದಿನದ ಸಂಭ್ರಮವನ್ನಾಚರಿಸಬೇಕಾದ ಮನೆಯಲ್ಲಿ ಶೋಕ ಮನೆ ಮಾಡಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸಿಟಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com