ನೀವು ಕೂಡ ನಟ ಸಿಂಬು ಮನವಿಗೆ ಬೆಂಬಲ ನೀಡುವಿರಾ?

ನೀರಿದ್ದರೆ ಯಾರೂ ಕೂಡ ಕೊಡುವುದಿಲ್ಲ ಎಂದು ಹೇಳುವುದಿಲ್ಲ.. ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂಬ ತಮಿಳುನಟ ಸಿಂಬು ಅವರ ಮನವಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ನೀರಿದ್ದರೆ ಯಾರೂ ಕೂಡ ಕೊಡುವುದಿಲ್ಲ ಎಂದು ಹೇಳುವುದಿಲ್ಲ.. ಕರ್ನಾಟಕ ಮಾತೆ ತಮಿಳನಿಗಾಗಿ ಒಂದು ಲೋಟ ನೀರು ಕೊಡುವೆಯಾ ಎಂಬ ತಮಿಳುನಟ ಸಿಂಬು ಅವರ ಮನವಿಗೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ರಾಜಕೀಯದ ಹೊರತಾಗಿ ಮಾನವೀಯತೆ ದೃಷ್ಟಿಯಿಂದ ಕಾವೇರಿ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ನಟ ಸಿಂಬು ವಾದ ಇದೀಗ ಎಲ್ಲಡೆ ಶ್ಲಾಘನೆಗೆ ಪಾತ್ರವಾಗಿದೆ. ಈಗಾಗಲೇ ಸಾವಿರಾರು ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಸಿಂಬು ಮನವಿಗೆ ಬೆಂಬಲ ನೀಡುತ್ತಿದ್ದು, ಇನ್ನು ಸಾಕಷ್ಚು ಮಂದಿ ಟ್ವೀಟ್ ಮಾಡುವ ಮೂಲಕ ಸಿಂಬುಗೆ ಬೆಂಬಲ ಸೂಚಿಸುತ್ತಿದ್ದಾರೆ.
ನೀವು ಕೂಡ ಸಿಂಬುಗೆ ಬೆಂಬಲಿಸಬೇಕೇ?
ನೀವು ಬಳಿಸಿದ ಬಳಿಕ ಉಳಿದ ನೀರನ್ನು ತಮಿಳನಿಗೆ ಕೊಡಿ ಎಂಬ ನಟ ಸಿಂಬು ಮನವಿಗೆ ನೀವೂ ಕೂಡ ಬೆಂಬಲಿಸಬೇಕು ಎಂದರೆ, ನಿಮ್ಮ ಸಮೀಪದಲ್ಲಿರುವ ಅಥವಾ ನಿಮ್ಮ ತಮಿಳು ಸ್ನೇಹಿತನಿಗೆ ಒಂದು ಲೋಟ ನೀರು ನೀಡಿ.. ಅದನ್ನು ವಿಡಿಯೋ ಅಥವಾ ಫೋಟೋ ಮಾಡಿ ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿ ನಿಮ್ಮ ಅನಿಸಿಕೆ ಬರೆಯಿರಿ.. ಬಳಿಕ #UniteForHumanity ಎಂಬ ಹ್ಯಾಶ್ ಟ್ಯಾಗ್ ಹಾಕಿ ಪೋಸ್ಟ್ ಮಾಡಿ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com