ಇದೇ ವೇಳೆ ವಾಜಪೇಯಿ ಅವರ ಬಗ್ಗೆ ನನಗೆ ಅಪಾರ ಗೌರವವಿದೆ ಎಂದ ನಟ ಪ್ರಕಾಶ್ ರೈ, ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವನಲ್ಲ. ಹಾಗಾಗಿ ಯಾವುದೇ ಪಕ್ಷಕ್ಕೆ ಮತದಾರರು ಮತ ಹಾಕುವಂತೆ ಒತ್ತಡ ಹೇರುವುದಿಲ್ಲ ಎಂದು ಹೇಳಿದರು. ಇಂತಹ ಕ್ಷುಲ್ಲಕ ರಾಜಕೀಯ ಮಾಡುವವರ ವಿರುದ್ಧ ಪ್ರಶ್ನೆ ಮಾಡುವ ಎದೆಗಾರಿಕೆ ಜನರಿಗೆ ಬರಬೇಕು. ಧರ್ಮ ನಮ್ಮ ಸ್ವಂತದ್ದು, ಹಿಂದೂ, ಸಿಕ್ಕ, ಮುಸ್ಲಿಂ, ಲಿಂಗಾಯಿತ, ಕ್ರೈಸ್ತರ ಧರ್ಮಗಳು ರಾಜಕೀಯವಾಗಬಾರದು. ಧರ್ಮಗಳಿಗೆ ದೊಡ್ಡ ಶಕ್ತಿಯಿದೆ. ಪ್ರಾರ್ಥನೆ ಮಾಡಲು ಅಂತಹ ಧರ್ಮಗಳು ಬೇಕು. ಮಠ ಮಂದಿರಗಳಿಗೆ ಭೇಟಿ ನೀಡುವುದು ಸ್ವತಂತ್ರ ಬಂದಾಗಿನಿಂದಲೂ ನಡೆಯುತ್ತಿದೆ. ಯಾವುದೇ ಮತದಾರ ಇವರು ನಮ್ಮ ಜಾತಿ, ನಮ್ಮ ಧರ್ಮ ಎಂದು ಮತ ಚಲಾಯಿಸಬಾರದು ಎಂದು ಪ್ರಕಾಶ್ ರೈ ಹೇಳಿದರು.