ಎಂಎಲ್ಎ, ಎಂಎಲ್'ಸಿ ಮತ್ತು ಎಂಪಿಗಳ ತಿಂಗಳ ವೇತನವಷ್ಟೇ ಅಲ್ಲದೆ, ನೆರವು ಕಾರ್ಯಕ್ಕಾಗಿ ರಾಜ್ಯಸಭಾ ಸಂಸದ ಕೆ.ಸಿ.ರಾಮಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ವಿಶೇಷ ತಂಡವನ್ನು ರಚನೆ ಮಾಡಿದೆ. ಈ ತಂಡದ ಮೂಲಕ ನೆರವಿನ ಕಾರ್ಯವನ್ನು ನಡೆಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.