ಬೆಂಗಳೂರು: ಆಸ್ತಿಗಾಗಿ ತಂದೆಯ ಕಣ್ಣನ್ನೇ ಕಿತ್ತು ಹಾಕಿದ ಮಗ

ಕೇವಲ ಆಸ್ತಿಗಾಗಿ ಯುವಕನೊಬ್ಬ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿದ ದಾರುಣ ಘಟನೆ ಬೆಂಗಳೂರಿನ ಶಾಕಾಂಬರಿ...
ಚೇತನ್
ಚೇತನ್
ಬೆಂಗಳೂರು: ಕೇವಲ ಆಸ್ತಿಗಾಗಿ ಯುವಕನೊಬ್ಬ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿದ ದಾರುಣ ಘಟನೆ ಬೆಂಗಳೂರಿನ ಶಾಕಾಂಬರಿ ನಗರದಲ್ಲಿ ಮಂಗಳವಾರ ನಡೆದಿದೆ.
65 ವರ್ಷದ ತನ್ನ ತಂದೆ, ನಿವೃತ್ತ ಸರ್ಕಾರಿ ನೌಕರ ಪರಮೇಶ್‌ ಅವರ ಕಣ್ಣು ಕಿತ್ತುಹಾಕಿದ ಅವರ ಪುತ್ರ ಚೇತನ್​ ನನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 
ಗಾಂಜಾ ವ್ಯ,ಸನಿಯಾಗಿದ್ದ ಚೇತನ್ ಕೈ ಬೆರಳಿನಿಂದ ತನ್ನ ತಂದೆಯ ಒಂದು ಕಣ್ಣು ಗುಡ್ಡೆ ಕಿತ್ತು ಹಾಕಿದ್ದು, ಪರಮೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪರಮೇಶ್​ ಅವರು ಡ್ರಗ್ಸ್ ವ್ಯಸನಿಯಾಗಿದ್ದ ಪುತ್ರ ಚೇತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಇತ್ತೀಚಿಗೆ ಸಂಬಂಧಿಕರೆಲ್ಲರೂ ಸೇರಿ ತಂದೆ ಮಗನ ನಡುವೆ ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ಒಂದು ಮಾಡಿದ್ದರು. ಚೇತನ್​ ಕುಟುಂಬ ಸೇರಿದರೂ ಮನೆಯ ಮೇಲೆ ಸಣ್ಣದೊಂದು ಕೊಠಡಿಯಲ್ಲಿ ವಾಸ ಮಾಡುತ್ತಿದ್ದ. ಹೀಗಿರುವಾಗಲೇ ತಿಂಗಳ ಹಿಂದೆ ಪರಮೇಶ್​​ ಅವರ ಪತ್ನಿ ತೀರಿಕೊಂಡಿದ್ದರು.
ತಾಯಿ ಸಾವಿಗೀಡಾಗುತ್ತಿದ್ದಂತೆ ಆಸ್ತಿ ಮೇಲೆ ಕಣ್ಣು ಹಾಕಿದ ಚೇತನ್​, ಇದೇ ವಿಚಾರವಾಗಿ ತಂದೆಯೊಂದಿಗೆ ಜಗಳ ತೆಗೆದಿದ್ದಾನೆ. ಆಸ್ತಿ ಬರೆದುಕೊಡುವಂತೆ ಮಂಗಳವಾರವೂ ತಂದೆಯನ್ನು ಪೀಡಿಸಿದ್ದ. ಹೀಗಾಗಿ ತಂದೆ ಮಗನ ನಡುವೆ ಜೋರು ಜಗಳ ನಡೆದಿದೆ. ಕೊನೆಗೆ ಚೇತನ್​ ತನ್ನ ತಂದೆ ಪರಮೇಶ್​​ ಅವರ ಕಣ್ಣನ್ನೇ ಕಿತ್ತು ಹಾಕಿದ್ದಾನೆ. ಪರಮೇಶ್​ ಅವರನ್ನು ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com