ತಾಯಿ ಸಾವಿಗೀಡಾಗುತ್ತಿದ್ದಂತೆ ಆಸ್ತಿ ಮೇಲೆ ಕಣ್ಣು ಹಾಕಿದ ಚೇತನ್, ಇದೇ ವಿಚಾರವಾಗಿ ತಂದೆಯೊಂದಿಗೆ ಜಗಳ ತೆಗೆದಿದ್ದಾನೆ. ಆಸ್ತಿ ಬರೆದುಕೊಡುವಂತೆ ಮಂಗಳವಾರವೂ ತಂದೆಯನ್ನು ಪೀಡಿಸಿದ್ದ. ಹೀಗಾಗಿ ತಂದೆ ಮಗನ ನಡುವೆ ಜೋರು ಜಗಳ ನಡೆದಿದೆ. ಕೊನೆಗೆ ಚೇತನ್ ತನ್ನ ತಂದೆ ಪರಮೇಶ್ ಅವರ ಕಣ್ಣನ್ನೇ ಕಿತ್ತು ಹಾಕಿದ್ದಾನೆ. ಪರಮೇಶ್ ಅವರನ್ನು ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ.