ಆರೋಪಿ ವರದರಾಜು ಶ್ರೀರಂಗಪಟ್ಟಣ ಮೂಲದವನಾಗಿದ್ದು, ಈತನ ವಿರುದ್ಧ ಅನ್ನಪೂರ್ಣೇಶ್ವರಿ ನಗರ, ಜ್ಞಾನಭಾರತಿ, ಕೆಂಗೇರಿ ಹಾಗೂ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ 25 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದವೆ. 80 ಭೂ ವಿವಾದ ಪ್ರಕರಣದಲ್ಲಿ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದಾನೆ. ಆರೋಪಿಗಳು ರೌಡಿಗಳನ್ನು ಬಳಸಿಕೊಳ್ಳುವುದರಿಂತ ಸಂತ್ರಸ್ತರು ದೂರು ನೀಡಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಜನರು ಹೆದರಬಾರದು. ಮುಂದಕ್ಕೆ ಬಂದು ದೂರು ನೀಡಬೇಕು. ಸಿಸಿಬಿಯೊಂದಿಗೆ ಸಹಕರಿಸಬೇಕೆಂದು ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.