ರಾಮಚಂದ್ರ ಗುಹಾ
ರಾಮಚಂದ್ರ ಗುಹಾ

ಗೋಮಾಂಸ ಸೇವನೆ ಕುರಿತು ಟ್ವೀಟ್: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾಗೆ ಬೆದರಿಕೆ ಕರೆ

ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ...
ಬೆಂಗಳೂರು: ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ. 
ಇತ್ತೀಚೆಗೆ ರಾಮಚಂದ್ರ ಗುಹಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಈ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 
ಬಿಜೆಪಿ ಸರ್ಕಾರವಿರುವ ಗೋವಾ ರಾಜ್ಯದಲ್ಲಿ ಗೋಮಾಂಸ ತಿಂದು ಸಂಭ್ರಮಿಸುತ್ತಿದ್ದೇನೆಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಗುಹಾ ಅವರು ಟ್ವೀಟನ್ನು ಡಿಲೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅಪರಿಚ ವ್ಯಕ್ತಿಯೊಬ್ಬ ಗುಹಾ ಅವರಿಗೆ ಬೆದರಿಕೆ ಕರೆ ಮಾಡಿದ್ದಾನೆಂದು ವರದಿಗಳು ತಿಳಿಸಿವೆ. 
ಬೆದರಿಕೆ ಕರೆ ಬಂದಿರುವ ಕುರಿತಂತೆ ಸ್ವತಃ ರಾಮಚಂದ್ರ ಗುಹಾ ಅವರೇ ಟ್ವೀಟ್ ಮಾಡಿದ್ದು, ದೆಹಲಿ ಮೂಲದ ವ್ಯಕ್ತಿಯಾಗಿರುವ ಸಂಜಯ್ ಎಂಬಾತ ನನಗೆ ಬೆದರಿಕೆ ಕರೆ ಮಾಡಿದ್ದು, +91-98351-38678 ಸಂಖ್ಯೆಯಿಂದ ನನಗೆ ಬೆದರಿಕೆ ಕರೆ ಬಂದಿದೆ. ಕೇವಲ ನನಗಷ್ಟೇ ಅಲ್ಲದೆ, ನನ್ನ ಪತ್ನಿಗೂ ಬೆದರಿಕೆ ಹಾಕಿದ್ದಾನೆಂದು ಹೇಳಿದ್ದಾರೆ. 
ಮಾಹಿತಿ ತಿಳಿದ ಕೂಡಲೇ ಹಲಸೂರು ಪೊಲೀಸ್ ಠಾಣೆಯ ಇನ್ಸ್'ಪೆಕ್ಟರ್ ರಾಮಚಂದ್ರಾ ಗುಹಾ ಅವರನ್ನು ಸಂಪರ್ಕಿಸಿದ್ದಾರೆ. 
ಪ್ರಕರಣ ಸಂಬಂಧ ಗುಹಾ ಅವರು ಲಿಖಿತವಾಗಿ ಯಾವುದೇ ದೂರು ನೀಡಿಲ್ಲ. ಹಲಸೂರಿನ ಅವರ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿದ್ದು, ಬೀಟ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com