15 ವರ್ಷಗಳಿಂದ ಕೊಟ್ಟಿಗೆಪಾಳ್ಯದಲ್ಲಿ ನೆಲೆಯೂರಿರವ ಆರೋಪಿ ಹರೀಶ್, ಸುಂಕದಕಟ್ಟೆಯಲ್ಲಿ ವೆಲ್ಡಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಎಟಿಎಂ ಘಟಕದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವ ಸಂಗತಿ ತಿಳಿದಿದ್ದ ಆತ, ರಾತ್ರಿ ವೇಳೆ ಅಲ್ಲಿನ ಹಣ ತುಂಬಿದ ಯಂತ್ರ ತೆರೆದು ಹಣ ದೋಚಲು ಸಂಚು ರೂಪಿಸಿದ್ದ. ಅದರಂತೆ ಮಂಗಳವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಎಟಿಎಂ ಬಳಿ ಬಂದಿದ್ದಾನೆ.