ಬಶೀರ್ ಅವರು ಸಾವನ್ನಪ್ಪಿದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಎಜೆ ಆಸ್ಪತ್ರೆಯ ಬಳಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿದ್ದ ಬಶೀರ್ ಕುಟುಂಬಸ್ಥರು ಕೂಡ, ಬಶೀರ್ ಸಾವಿನಲ್ಲಿ ರಾಜಕೀಯ ಪಕ್ಷಗಳು, ಸಂಘಟನೆಗಳು ರಾಜಕೀಯ ಮಾಡಬಾರದು. ಜನರು ಶಾಂತಿಯನ್ನು ಕಾಪಾಡಿ, ಬಶೀರ್ ಆತ್ಮಕ್ಕೆ ಶಾಂತಿಯನ್ನು ಕೋರಬೇಕೆಂದು ಮನವಿ ಮಾಡಿಕೊಂಡರು.