ತೆರಿಗೆ ವಂಚನೆ ಮಾಡಿಲ್ಲ, ನಿಯಮ ಪಾಲಿಸುವ ಕುಟುಂಬ ನಮ್ಮದು: ಸಿಎಂ ಕುಮಾರಸ್ವಾಮಿ

ಬಿಬಿಎಂಪಿಗೆ ತೆರಿಗೆ ವಂಚನೆ ಮಾಡಿಲ್ಲ, ನಿಯಮ ಪಾಲಿಸುವ ಕುಟುಂಬ ನಮ್ಮದು ಎಂದು ಮುಖ್ಯಮಂತ್ರಿ ಹೆಚ್.ಡಿ, ಕುಮಾರಸ್ವಾಮಿಯವರು ಬುಧವಾರ ಹೇಳಿದ್ದಾರೆ...
ಮುಖ್ಯಮಂತ್ರಿ ಹೆಚ್.ಡಿ, ಕುಮಾರಸ್ವಾಮಿ
ಮುಖ್ಯಮಂತ್ರಿ ಹೆಚ್.ಡಿ, ಕುಮಾರಸ್ವಾಮಿ
ಬೆಂಗಳೂರು: ಬಿಬಿಎಂಪಿಗೆ ತೆರಿಗೆ ವಂಚನೆ ಮಾಡಿಲ್ಲ, ನಿಯಮ ಪಾಲಿಸುವ ಕುಟುಂಬ ನಮ್ಮದು ಎಂದು ಮುಖ್ಯಮಂತ್ರಿ ಹೆಚ್.ಡಿ, ಕುಮಾರಸ್ವಾಮಿಯವರು ಬುಧವಾರ ಹೇಳಿದ್ದಾರೆ. 
ಬಿಬಿಎಂಪಿ ಟೋಟಲ್ ಸ್ಟೇಷನ್ ಸರ್ವೆ ವರದಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಎಲ್ಲಾ ರೀತಿಯ ತೆರಿಗೆಯನ್ನು ಕಟ್ಟಲಾಗಿದೆ. ತೆರಿಗೆ ವಂಚನೆ ಕುರಿತ ಸುದ್ಧಿಗಳು ಸರಿಯಲ್ಲ ಎಂದು ಹೇಳಿದ್ದಾರೆ. 
ಸುಳ್ಳು ಸುದ್ದಿಗಳ ಮೂಲಕ ನಮ್ಮ ವಿರುದ್ಧ ಪಿತೂರಿ ನಡೆಸಲಾಗಿದೆ. ನಾವು ಯಾವುದೇ ರೀತಿಯ ತೆರಿಗೆ ವಂಚನೆ ಮಾಡಿಲ್ಲ. ನಿಯಮಗಳನ್ನು ಪಾಲನೆ ಮಾಡುವ ಕುಟುಂಬ ನಮ್ಮದು ಎಂದು ತಿಳಿಸಿದ್ದಾರೆ. 
ಬಿಬಿಎಂಪಿ ವ್ಯಾಪ್ತಿಯ 63 ಕಟ್ಟಡಗಳ ಮಾಲೀಕರು ಪಾಲಿಕೆ ಅಧಿಕಾರಿಗಳಿಗೆ ಸುಳ್ಳು ಆಸ್ತಿ ಘೋಷಣೆ ಮಾಡಿಕೊಂಡು ಹಲವು ವರ್ಷಗಳಿಂದ ಬರೋಬ್ಬರಿ ರೂ.559 ಕೋಟಿ ನಷ್ಟು ಆಸ್ತಿ ತೆರಿಗೆ ವಂಚನೆ ಮಾಡಿದ್ದು, ಇದರಲ್ಲಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರ ಕುಟುಂಬ ಸದಸ್ಯರಿಗೆ ಸೇರಿದ ಆಸ್ತಿಗಳಿವೆ ಎಂಬ ಆರೋಪಗಳು ಕೇಳಿಬಂದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com