ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಜಿತಾಭ್ ಸಹೋದರ ಅರುಣಾಭ್ ಅವರು, ಪ್ರಕರಣ ಭೇಧಿಸಲು ಪೊಲೀಸರಿಗೆ ಹಾಗೂ ಸಿಐಡಿ ಅಧಿಕಾರಿಗಳಿಗೆ ಏಕೆ ಆಗುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಪ್ರಕರಣವೊಂದು ಒಬ್ಬ ವ್ಯಕ್ತಿಯ ಬದುಕು-ಸಾವಿನ ಪ್ರಶ್ನೆಯಾಗಿದೆ. ನನ್ನ ಸಹೋದರ ನಾಪತ್ತೆಯಾಗಿ 7 ತಿಂಗಳುಗಳು ಕಳೆದಿವೆ. ಆದರೂ ಆತನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಸಿಬಿಐ ಹಾಗೂ ಆಂತರಿಕ ಗುಪ್ತಚರ ದಳ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡು ಸಹೋದರನನ್ನು ಹುಡುಕುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಳಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆಂದು ಹೇಳಿದ್ದಾರೆ.