ಎಂಬಿ ಪಾಟೀಲ್ ಅವರು ಹೇಳಿಕೊಂಡಂತೆ ಸಚ್ಚಿದಾನಂದ ಎನ್ನುವವರು ಅಂಬರೀಷ್ ಅವರ ಆಪ್ತರಾಗಿದ್ದು, ಅವರ ಮೂಲಕವೇ ತನಗೂ ಪರಿಚಯ. ನಾನು ಸಚ್ಚಿದಾನಂದ ಸ್ನೇಹಿತರಾಗಿದ್ದು, ನಿತ್ಯ ಕರೆ ಮಾಡಿ ಮಾತನಾಡುತ್ತಿದ್ದೆ. ಕಳೆದ ವಾರ ಕೂಡ ಕರೆ ಮಾಡಿ ಆತನೊಂದಿಗೆ ಮಾತನಾಡಿದ್ದೇನೆ. ಇದು ಸಚ್ಚಿದಾನಂದನ ಮೊಬೈಲ್ ಸಂಖ್ಯೆಯೇ ಹೊರತು ಸೈಕಲ್ ರವಿಯದ್ದಲ್ಲ ಎಂದು ಎಂಬಿ ಪಾಟಿಲ್ ಸ್ಪಷ್ಟನೆ ನೀಡಿದ್ದಾರೆ.