ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ ಶಿರೂರು ಶ್ರೀಗಳ ಆಪ್ತೆ ರಮ್ಯಾ ಶೆಟ್ಟಿ ಪೊಲೀಸರ ವಶಕ್ಕೆ!

: ಶಿರೂರು ಶ್ರೀ ಸಾವಿನ ಪ್ರಕರಣದಲ್ಲಿ ಸಂಶಯಕ್ಕೆ ಗುರಿಯಾಗಿರುವ ರಮ್ಯಾ ಶೆಟ್ಟಿ ಪರಾರಿಯಾಗಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ....
ರಮ್ಯಾ ಶೆಟ್ಟಿ
ರಮ್ಯಾ ಶೆಟ್ಟಿ
ಉಡುಪಿ: ಶಿರೂರು ಶ್ರೀ ಸಾವಿನ ಪ್ರಕರಣದಲ್ಲಿ ಸಂಶಯಕ್ಕೆ ಗುರಿಯಾಗಿರುವ ರಮ್ಯಾ ಶೆಟ್ಟಿ ಪರಾರಿಯಾಗಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಮೂವರು ಮಹಿಳೆಯರೊಂದಿಗೆ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದ ರಮ್ಯಾ ಶೆಟ್ಟಿ ಕಾರು ವೇಣೂರಿನ ಆಳದಂಗಡಿ ಸತ್ಯದೇವರ ದೇಗುಲದ ಬಳಿ ಪಂಕ್ಚರ್‌ ಆಗಿದೆ. ಅನುಮಾನಾಸ್ಪವಾಗಿ ಗ್ಯಾರೇಜ್‌ ಬಳಿ ಕಾರು ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 
ಸ್ಥಳಕ್ಕೆ ಕೂಡಲೇ ತೆರಳಿದ ವೇಣೂರು ಪೊಲೀಸರು ಪರಿಶೀಲನೆ ನಡೆಸಿದಾಗ ರಮ್ಯಾ ಶೆಟ್ಟಿ ಬುರ್ಖಾ ಹಾಕಿಕೊಂಡಿರುವುದು ತಿಳಿದು ಬಂದಿದೆ. ರಮ್ಯಾ ಶೆಟ್ಟಿ ಜೊತೆಗಿದ್ದ  ಮೂವರು ಮಹಿಳೆಯರನ್ನು ಮತ್ತು ಕಾರು ಚಾಲಕನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗಾಗಿ ಉಡುಪಿ ಪೊಲೀಸರ ವಶಕ್ಕೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com