ಬೆಂಗಳೂರು: ಅಮಾನ್ಯಗೊಂಡಿದ್ದ 35.5 ಲಕ್ಷ ರೂ. ನೋಟು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ಅಮಾನತುಗೊಳಿಸಲಾಗಿದ್ದ ಐವರು ಪೊಲೀಸರನ್ನು ಪುನ: ಸೇವೆಗೆ ಸೇರಿಸಿಕೊಳ್ಳಲು ಗೃಹ ಇಲಾಖೆ ಆದೇಶಿಸಿದೆ.
ಐವರು ಪೊಲೀಸರ ವಿರುದ್ಧ ಇಲಾಖೆ ವಿಚಾರಣೆ ನಡೆಸದೆ ಹಿರಿಯ ಅಧಿಕಾರಿಗಳು ಸೇವೆಯಿಂದ ಅಮಾನತು ಮಾಡಿದ್ದ ಕಾರಣದಿಂದಾಗಿ ವಿಚಾರಣಾ ಪ್ರಕ್ರಿಯೆಯಲ್ಲಿ ಲೋಪ ಉಂಟಾಗಿತ್ತು.
Advertisement