ಮುಖ್ಯಮಂತ್ರಿಯಾಗಿ ಅಲ್ಲದೆ ಕನ್ನಡಿಗನಾಗಿ ಹೇಳುವುದಾದರೆ, ಕಾಳಾ ಚಿತ್ರವನ್ನು ಬಿಡುಗಡೆ ಮಾಡದೆ ಇರುವುದೇ ಸೂಕ್ತ. ಇದರಿಂದ ಚಿತ್ರ ತಂಡವೇ ಹಿಂದೆ ಸರಿಯುವುದು ಉತ್ತಮ. ಚಿತ್ರ ಬಿಡುಗಡೆಗೆ ಕನ್ನಡ ಪರ ಸಂಘಟನೆಗಳು, ಸಿನಿಮಾ ಮಂಡಳಿಯ ವಿರೋಧವಿದೆ. ಒಂದು ವೇಳೆ ಚಿತ್ರವನ್ನು ಬಿಡುಗಡೆ ಮಾಡಿದರೂ ಅದರಿಂದಾಗುವ ನಷ್ಟ ಹಾಗೂ ಪರಿಣಾಮಗಳನ್ನು ಅವರೇ ಎದುರಿಸಬೇಕಾಗುತ್ತದೆ. ನಾನೊಬ್ಬ ಕನ್ನಡಿಗನಾಗಿ ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೇನೆಂದು ತಿಳಿಸಿದ್ದಾರೆ.