ವಿಜಯನಗರದ ನಿವಾಸಿ ಪ್ರವೀಣ್ ಎಂಬುವರು ಮೇ 21 ರಂದು ರಾತ್ರಿ 8.45 ಗಂಟೆಗೆ ಪಟ್ಟೆಗಾರಪಾಳ್ಯ ರಸ್ತೆಯಲ್ಲಿ ಹೋಗುತ್ತಿದ್ದರು. ಅವರನ್ನು ಅಡ್ಡಗಟ್ಟಿದ್ದ ಶರವಣ ಹಾಗೂ ಆತನ ಸಹಚರರು, ರು 15 ಸಾವಿರ ಮೌಲ್ಯದ ಮೊಬೈಲ್ ಹಾಗೂ ಯುಪಿಎಸ್ ಸಿಸ್ಟಮ್ ಕಿತ್ತೊಯ್ದಿದ್ದರು. ಅದೇ ಆರೋಪಿಗಳು, ಜೂನ್ 2ರಂದು ಕಾಮಾಕ್ಷಿಪಾಳ್ಯದಲ್ಲಿ ವ್ಯಕ್ತಿಯೊಬ್ಬರಿಂದ ರು,3 ಲಕ್ಷ ನಗದು ಸುಲಿಗೆ ಮಾಡಿದ್ದರು.